ಎ.14 ಉಡುಪಿಯಲ್ಲಿ ಮಹಾನಾಯಕನ ಭೀಮಾಯಾನ

Update: 2021-04-10 13:13 GMT

ಉಡುಪಿ, ಎ.10: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರ 130ನೆ ಜನ್ಮದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಮಹಾನಾಯಕನ ಭೀಮಾಯಾನ ಎಂಬ ವಾಹನ ಜಾಥವನ್ನು ಎ.14ರಂದು ಹಮ್ಮಿಕೊಳ್ಳಲಾಗಿದೆ.

ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್ ಬಳಿ ಬೆಳಿಗ್ಗೆ 11ಗಂಟೆಗೆ ಆರಂಭವಾಗುವ ಈ ವಾಹನ ರ್ಯಾಲಿ, ಅಂಬೇಡ್ಕರ್‌ರವರ ಟ್ಯಾಬ್ಲೋದೊಂದಿಗೆ ಬ್ರಹ್ಮಗಿರಿ ಮಾರ್ಗವಾಗಿ ಕರಾವಳಿ ಬೈಪಾಸ್ ಮೂಲಕ ಹಾದು ಬನ್ನಂಜೆ, ಸಿಟಿಬಸ್ ನಿಲ್ದಾಣ, ಕೆ.ಎಂ.ಮಾರ್ಗವಾಗಿ ಜೊಡುಕಟ್ಟೆ ಮೂಲಕ ಮತ್ತೆ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ಅಧ್ಯಕ್ಷ ಹರೀಶ್ ಸಾಲಾನ್ ಮತ್ತು ದಲಿತ ಮುಖಂಡ ಸುಂದರ್ ಕ್ಪೆಟ್ಟು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News