ಇಲಾಖೇತರ ಕೆಲಸಗಳನ್ನು ಅಂಗನವಾಡಿ ನೌಕರರಿಗೆ ನೀಡಬೇಡಿ: ಬಿ.ಎಂ.ಭಟ್

Update: 2021-04-10 13:31 GMT

ಬೆಳ್ತಂಗಡಿ: ಮೊದಲೇ ಅತೀಯಾದ ಕೆಲಸಗಳಿಂದ ಹಾಗೂ ಕನಿಷ್ಟ ವೇತನವೂ ಸಿಗದೆ ದುಡಿಯುವ ಅಂಗನವಾಡಿ ನೌಕರರನ್ನ ಜೀತದಾಳುಗಳಂತೆ ಎಲ್ಲಾ ಇಲಾಖೆಯ ಅದಿಕಾರಿಗಳೂ ಬೇರೆ ಬೇರೆ ಕೆಲಸ ಮಾಡಲು ಹೇಳುವುದು ನಿಲ್ಲಬೇಕು. ಇಲಾಖೇತರ ಕೆಲಸಗಳನ್ನ ಅಂಗನವಾಡಿ ನೌಕರರಿಗೆ ನೀಡಬಾರದು ಎಂದು ಹಿರಿಯ ಕಾರ್ಮಿಕ ನಾಯಕ ಬಿ.ಎಂ.ಭಟ್ ಹೇಳಿದರು

ಅವರು ಇಂದು ಬೆಳ್ತಂಗಡಿ ತಾಲೂಕು ಅಂಗನವಾಡಿ ನೌಕರರ ಸಂಘದ ವತಿಯಿಂದ ಸಿಡಿಪಿಓ ಮೂಲಕ ಸರಕಾರಕ್ಕೆ ಮನವಿ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು. ಅಂಗನವಾಡಿ ನೌಕರರನ್ನ ಗುಲಾಮರನ್ನಾಗಿ ಕಾಣುವ ಯಾವುದೇ ಇಲಾಖೆಯ ವಿರುದ್ದ ತೀವ್ರ ಸ್ವರೂಪದ ಹೋರಾಟ ನಡೆಸಲು ಸಂಘ ಸಿದ್ದವಿದೆ ಎಂದರು.

ನಂತರ ಸಿಡಿಪಿಓ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ನೀಡಲಾಯಿತು. ಸಂಘದ ಅದ್ಯಕ್ಷರಾದ ಗಾಯತ್ರಿ ದೇವಿ ಸ್ವಾಗತಿಸಿದರು. ಸಹಕಾರ್ಯದರ್ಶಿ ಜಾನಕಿ ವಂದಿಸಿದರು. ಈ ಸಂದರ್ಭ ಸಂಘದ ಪದಾಧಿಕಾರಿಗಳೂ ಕಾರ್ಮಿಕ ನಾಯಕರುಗಳಾದ ಈಶ್ವರಿ, ರಾಮಚಂದ್ರ, ಅಧಿತಿ, ಭವ್ಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News