ಮಂಗಳೂರಿನ ಬಾಲಕಿ ಬೆಂಗಳೂರಿನಲ್ಲಿ ರಕ್ಷಣೆ

Update: 2021-04-10 14:26 GMT

ಮಂಗಳೂರು, ಎ.10: ನಗರದಿಂದ ಅಪಹರಣಗೊಂಡಿದ್ದಳು ಎಂದು ಹೇಳಲಾದ 16 ವರ್ಷ ಪ್ರಾಯದ ಬಾಲಕಿಯನ್ನು ರೈಲ್ವೆ ಪೊಲೀಸರು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಎ.9ರಂದು ಬೆಳಗ್ಗೆ 8 ಗಂಟೆಯ ವೇಳೆಗೆ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಶಂಕಾಸ್ಪದ ರೀತಿಯಲ್ಲಿದ್ದ ಬಾಲಕಿಯನ್ನು ರೈಲ್ವೆ ಸುರಕ್ಷತಾ ದಳದ ಅಧಿಕಾರಿ, ಸಿಬ್ಬಂದಿಗಳು ವಿಚಾರಿಸಿದರು. ಆವಾಗ ಆಕೆ ತಾನು ಮಂಗಳೂರಿನವಳಾಗಿದ್ದು, ತನ್ನನ್ನು ಎ.8ರಂದು ಯುವಕನೋರ್ವ ಬೆಂಗಳೂರಿಗೆ ಕರೆದುಕೊಂಡು ಬಂದಿರುವುದು ತಿಳಿಸಿದ್ದಾಳೆ ಎಂದು ರೈಲ್ವೆ ಪೊಲೀಸರು ಮಂಗಳೂರು ಪೊಲೀಸರಿಗೆ ತಿಳಿಸಿದ್ದಾರೆ.

ಯುವಕ ಕೂಡ ಅಪ್ರಾಪ್ತ ಎನ್ನಲಾಗಿದೆ. ಇಬ್ಪರೂ ಮೂಲತಃ ಹೊರ ರಾಜ್ಯದವರು. ಪೋಷಕರು ಮಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ. ಬಾಲಕಿ ನಾಪತ್ತೆಯಾದ ಬಗ್ಗೆ ಆಕೆಯ ತಂದೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News