ಕೆಎಸ್ಸಾರ್ಟಿಸಿ ನೌಕರರ ಮುಷ್ಕರ ನಾಲ್ಕನೇ ದಿನಕ್ಕೆ: ಸುಳ್ಯದಿಂದ ಐವರು ಸಾರಿಗೆ ಉದ್ಯೋಗಿಗಳ ವರ್ಗಾವಣೆ

Update: 2021-04-10 14:39 GMT

ಸುಳ್ಯ: ಆರನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ 4 ನೇ ದಿನಕ್ಕೆ ಕಾಲಿಟ್ಟಿದೆ. ಬೆರಳೆಣಿಕೆಯ ಸರಕಾರಿ ಬಸ್ ಗಳು ಶನಿವಾರ ಓಡಾಟ ನಡೆಸಿದ್ದು, ಉಳಿದಂತೆ ಖಾಸಗಿ ವಾಹನಗಳ ಸೇವೆ ಮುಂದುವರಿದಿದೆ.

ಇದೀಗ ಸರ್ಕಾರವು ರಾಜ್ಯದಲ್ಲಿ ಸಾರಿಗೆ ನಿಗಮದ ನೌಕರರ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದೆ. ಇದರಂತೆ ಸುಳ್ಯ ಡಿಪೋದಿಂದ ಐವರು ಸಾರಿಗೆ ಉದ್ಯೋಗಿಗಳು ವರ್ಗಾವಣೆಗೊಂಡಿದ್ದು, ಇವರಲ್ಲಿ ನಾಲ್ವರು ರಾಮನಗರ, ಓರ್ವರು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ವರ್ಗಾವಣೆಗೊಂಡಿರುವ ಉದ್ಯೋಗಿಗಳು 7 ದಿನದ ಒಳಗೆ ವರ್ಗಾವಣೆಗೊಂಡಿರುವ ಸ್ಥಳಕ್ಕೆ ತೆರಳಿ ವರದಿ ಸಲ್ಲಿಸಬೇಕಾಗಿದೆ. ವರ್ಗಾವಣೆ ಕುರಿತ ಸರ್ಕಾರದ ನೀತಿಗೆ ನೌಕರರು ಅಸಮಾಧಾನ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News