ಕೋಡಿಹಳ್ಳಿ ಬಂಧನಕ್ಕೆ ಸಿಪಿಐಎಂ ಖಂಡನೆ

Update: 2021-04-10 16:41 GMT

ಉಡುಪಿ, ಎ.10: ಸಾರಿಗೆ ಮುಷ್ಕರ ನಿಷೇಧ ಮಾಡಿ ತನ್ನ ದಮನಕಾರಿ ಧೋರಣೆಯನ್ನು ಮುಂದುವರಿಸಿರುವ ರಾಜ್ಯ ಬಿಜೆಪಿ ಸರಕಾರವು ಕೋಡಿಹಳ್ಳಿ ಚಂದ್ರಶೇಖರವರನ್ನು ಬಂಧಿಸುವ ಮೂಲಕ ತನ್ನ ಪ್ರಜಾಪ್ರಭುತ್ವ ವಿರೋಧಿ ನಿಲುಮೆಯನ್ನು ಪ್ರಕಟಿಸಿದೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ.

ಬಂಧಿತ ಕೋಡಿಹಳ್ಳಿ ಚಂದ್ರಶೇಖರವರನ್ನು ಹಾಗು ಇತರರನ್ನು ಕೂಡಲೆ ಬಿಡುಗಡೆ ಮಾಡಬೇಕು. ರಾಜ್ಯ ಬಿಜೆಪಿ ಸರಕಾರ ಜನತೆಯನ್ನು ನೌಕರರು ಮತ್ತು ಸಾರ್ವಜನಿಕ ಸಾರಿಗೆ ವಿರುದ್ಧ ಎತ್ತಿ ಕಟ್ಟಿ ತನ್ನ ದುರಾಡಳಿತವನ್ನು ಮರೆಮಾಚುವ ರಾಜಕೀಯದಲ್ಲಿ ತೊಡಗಿರುವುದನ್ನು ಜನತೆ ಅರಿತು ನೌಕರ ರೊಂದಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News