ಕನ್ನಡ ಜಾಗೃತಿ ಅಭಿಯಾನ: ಉಡುಪಿ ಪತ್ರಿಕಾ ಭವನಕ್ಕೆ ಭೇಟಿ

Update: 2021-04-10 16:42 GMT

ಉಡುಪಿ, ಎ.10: ಕರ್ನಾಟಕ ಸರಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಅಭಿಯಾನದ ಪ್ರಯುಕ್ತ ಉಡುಪಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ರಂಗನಟ ಸುಕುಮಾರ್ ಮೋಹನ್, ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಹಾಗೂ ರಂಗನಟಿ ಶಿಲ್ಪ ಜೋಷಿ ಇಂದು ಪತ್ರಿಕಾ ಭವನಕ್ಕೆ ಭೇಟಿ ನೀಡಿದರು.

’ಕನ್ನಡದಲ್ಲೇ ನಿತ್ಯ ಸರಿಗನ್ನಡದಲ್ಲಿ ವ್ಯವಹರಿಸುವ ಮೂಲಕ ಕನ್ನಡ ನಾಡಿನಲ್ಲಿ ಸಿರಿಕನ್ನಡವನ್ನು ಉಳಿಸುವ ಬೆಳೆಸುವ ’ ಎಂಬ ಹಕ್ಕೊತ್ತಾಯದ ವಿನಂತಿ ಪತ್ರವನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅವರಿಗೆ ನೀಡಲಾಯಿತು.

ಕರುನಾಡಿನ ಎಲ್ಲಾ ಬಗೆಯ ಓದುಗರು ಕೇಳುಗರು ಮತ್ತು ವೀಕ್ಷಕರ ಪರವಾಗಿ ನಾವು ನಿಮ್ಮೊಂದಿಗೆ ಹಕ್ಕೊತ್ತಾಯ ಮಾಡುತ್ತೇವೆ. ನಿಮ್ಮೊಳಗಿನ ಸ್ಪರ್ಧೆ ಅತ್ಯುತ್ತಮ ಕನ್ನಡ ಬಳಕೆಯಲ್ಲಿ ಇರಲಿ, ಟಿವಿ ರೇಡಿಯೋ ಪತ್ರಿಕೆಗಳಲ್ಲಿ ಅನಗತ್ಯ ಇಂಗ್ಲಿಷ್ ಪದ ಬಳಕೆ ಬೇಡ, ಕೆಟ್ಟ ಪದಗಳು ಪದಪುಂಜಗಳನ್ನು ಬಳಸದೆ ಸಿರಿಗನ್ನಡವನ್ನು ಸರಿಗನ್ನಡವನ್ನು ಬಳಸಿ ಎಂದು ಮನವಿ ಮಾ ಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News