ಸೆಕ್ಯುಲರ್ ಯೂತ್ ಫಾರಂ ವತಿಯಿಂದ ರಮಝಾನ್ ಕಿಟ್ ವಿತರಣೆ

Update: 2021-04-18 12:58 GMT

ಪುತ್ತೂರು, ಎ.18: ಸೆಕ್ಯುಲರ್ ಯೂತ್ ಫಾರಂ (SYF ) ಇದರ ವತಿಯಿಂದ ಅರ್ಹ ಫಲಾನುಭವಿಗಳಿಗೆ ಪ್ರಥಮ ಹಂತದಲ್ಲಿ ಇನ್ನೂರರಷ್ಟು ರಮಝಾನ್ ಕಿಟ್ ವಿತರಿಸಲಾಯಿತು.

ಪುತ್ತೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ ಅರ್ಹ ಫಲಾನುಭವಿಗಳನ್ನು ಗುರುತಿಸಿಕೊಂಡು ರಮಝಾನ್ ಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನೊಳಗೊಂಡ ಕಿಟ್ ಅನ್ನು ಪುತ್ತೂರು ಅನ್ಸಾರಿಯ್ಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿಯವರು ಎಸ್ವೈಎಫ್ ನ ಮೋನು ಬಪ್ಪಳಿಗೆಯವರಿಗೆ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.

ಸೀಮಿತ ಅವಧಿಯಲ್ಲಿ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಸೆಕ್ಯೂಲರ್ ಯೂತ್ ಫಾರಂ ಸಂಘಟನೆಯು ಸಮುದಾಯದ ಭರವಸೆಯ ಬೆಳಕಾಗಿ ಮೂಡಿ ಬಂದಿದೆ. ಇದಕ್ಕೆ ಸಹಕರಿಸಿದ ಸರ್ವರಿಗೂ ಒಳಿತಾಗಲಿ ಎಂದು ಎಲ್.ಟಿ ರಝಾಕ್ ಹಾಜಿ ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ರಿಯಾಝ್ ಬಲ್ನಾಡ್, ಹಂಝತ್ ಸಾಲ್ಮರ, ರಝಾಕ್, ಶಕೀಲ್ ಕೂರ್ನಡ್ಕ, ರಹ್ಮಾನ್ ಸಂಪ್ಯ, ಅಲಿ ಪರ್ಲಡ್ಕ, ಸಿದ್ದೀಕ್ ಸುಲ್ತಾನ್, ಇಮ್ತಿಯಾಝ್, ರಶೀದ್ ಮುರ, ಆಸಿಫ್ ಕೆಮ್ಮಾಯಿ, ಅಝೀಝ್ ಕೆಮ್ಮಾಯಿ, ಫಾರೂಕು, ಜಾಬಿರ್ ಬೀಟಿಗೆ, ಇರ್ಫಾನ್ ಸಾಲ್ಮರ, ಹಾರಿಸ್ ಅಡ್ಕ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಾತಿಶ್ ಅಳಕೆಮಜಲು ಸ್ವಾಗತಿಸಿ, ಹನೀಫ್ ಪುಣ್ಚತ್ತಾರು ಧನ್ಯವಾದ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News