ಕೋವಿಡ್-‌19 ಲಸಿಕೆ ಹಾಕಿಸಿಕೊಳ್ಳುವುದರಿಂದ ಉಪವಾಸಕ್ಕೆ ಭಂಗವುಂಟಾಗುವುದಿಲ್ಲ: ಜಿಫ್ರಿ ಮುತ್ತುಕೋಯ ತಂಙಳ್‌

Update: 2021-04-18 18:01 GMT

ಕಾಞಂಗಾಡ್:‌ ಎಲ್ಲರೂ ಕೋವಿಡ್‌ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಸಮಸ್ತ ಕೇರಳ ಜಂಇಯ್ಯತುಲ್‌ ಉಲಮಾ ಅಧ್ಯಕ್ಷ ಹಾಗೂ ಕಾಞಂಗಾಡ್‌ ಸಂಯುಕ್ತ ಮುಸ್ಲಿಂ ಜಮಾಅತ್‌ ಖಾಝಿ ಜಿಫ್ರಿ ಮುತ್ತುಕೋಯ ತಂಙಳ್‌ ಹೇಳಿಕೆ ನೀಡಿದ್ದಾರೆ. ದೇಶದಾದ್ಯಂತ ಕೋವಿಡ್‌ ಸಾಂಕ್ರಾಮಿಕವು ಏರುಗತಿಯಲ್ಲಿ ಸಾಗುತ್ತಿದ್ದು, ಎಲಲ್ರೂ ಕೋವಿಡ್‌ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಅವರು ಹೇಳಿಕೆ ನೀಡಿದ್ದಾಗಿ ʼಮಾಧ್ಯಮಂʼ ವರದಿ ಮಾಡಿದೆ.

"ಕೋವಿಡ್‌ ಲಸಿಕೆಯನ್ನು ಎಲ್ಲರೂ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸುವದರಿಂದ ಉಪವಾಸ ವೃತವು ಮುರಿಯುವುದಿಲ್ಲ ಹಾಗೂ ವೃತಕ್ಕೆ ಯಾವುದೇ ಭಂಗವುಂಟಾಗುವುದಿಲ್ಲ ಎಂದು ಎಲ್ಲಾ ವಿಶ್ವಾಸಿಗಳೂ ಅರಿತಿರಬೇಕು" ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News