ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಬೆಂಕಿ ಅವಘಡ

Update: 2021-04-19 06:35 GMT

ಮಂಗಳೂರು, ಎ.19: ಬಜ್ಪೆಯ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಇಂದು ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿರುವುದು ವರದಿಯಾಗಿದೆ.

ಇಂದು ಬೆಳಗ್ಗೆ ಕಚೇರಿಯ ಬೀಗ ತೆರೆದು ಸ್ವಿಚ್ ಹಾಕಿದಾಗ ಎ.ಸಿ.ಯಲ್ಲಿ ಬೆಂಕಿ‌ ಕಾಣಿಸಿಕೊಂಡು ಸ್ಫೋಟಿಸಿತೆನ್ನಲಾಗಿದೆ‌. ಇದರಿಂದ ಎಸಿಗೆ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಮೂರು ವಾಹನಗಳಲ್ಲಿ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು‌ ನಂದಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಬ್ಯಾಂಕ್‌ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಬೆಂಕಿ‌ ಅವಘಡದಿಂದ ಯಾವುದೇ ದಾಖಲೆ ಪತ್ರಗಳಿಗೆ ಹಾನಿಯಾಗಿಲ್ಲ.‌ ಘಟನೆ ‌ನಡೆದ ತಕ್ಷಣ ಅಗ್ನಿಶಾಮಕ ದಳಕ್ಕೆ ‌ಮಾಹಿತಿ ನೀಡಿದ್ದೇವೆ. ಅರ್ಧಗಂಟೆಯೊಳಗೆ ಬೆಂಕಿ ನಂದಿಸಿದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಬ್ಯಾಂಕ್‌ನ ಕಟ್ಟಡಕ್ಕೆ ಗಾಜಿನ ಇಂಟೀರಿಯರ್ ಅಳವಡಿಸಿದ್ದರಿಂದ ದಟ್ಟ ಹೊಗೆ ಕಾಣಿಸಿತು. ಹಾಗಾಗಿ ಗಾಜನ್ನು ಒಡೆದು ಹಾಕಬೇಕಾಯಿತು. ನಷ್ಟದ ಅಂದಾಜು ಇನ್ನಷ್ಟೇ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News