×
Ad

"ನಮ್ಮ ದೇಶ ಉತ್ತಮ ವ್ಯವಸ್ಥೆ ಹೊಂದಿದೆ" ಎಂದು ಕೋವಿಡ್‌ ನೆರವನ್ನು ಭಾರತ ನಿರಾಕರಿಸಿದೆ: ವಿಶ್ವಸಂಸ್ಥೆ

Update: 2021-04-29 13:59 IST

ಹೊಸದಿಲ್ಲಿ: ವಿಶ್ವ ಸಂಸ್ಥೆ  ಆಫರ್ ಮಾಡಿದ ಕೋವಿಡ್ ಸಂಬಂಧಿತ ಸಹಾಯವನ್ನು ನಿರಾಕರಿಸಿರುವ ಭಾರತ,  ತನ್ನ ದೇಶ ಅಗತ್ಯವಿರುವ ಸಾಮಗ್ರಿಗಳ ಪೂರೈಕೆಯನ್ನು ನಿರ್ವಹಿಸಲು ʼಉತ್ತಮ ವ್ಯವಸ್ಥೆʼಯನ್ನು ಹೊಂದಿದೆ ಎಂದು ಹೇಳಿದೆಯೆಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗಟೆರ್ರೆಸ್ ಹೇಳಿದ್ದಾರೆ.

"ನಮ್ಮ ಇಂಟಗ್ರೇಟೆಡ್ ಸಪ್ಲೈ  ಚೈನ್ ಸಹಾಯ ಅಗತ್ಯವಿದ್ದರೆ ನೀಡುವುದಾಗಿ ನಾವು  ಹೇಳಿದೆವು. ಆದರೆ ಈಗಿನ ಸಮಯ ಅದರ ಅಗತ್ಯವಿಲ್ಲ ಏಕೆಂದರೆ ಈ ಅವಶ್ಯಕತೆ ಪೂರೈಸಲು ಭಾರತದ ಬಳಿ ಸಾಕಷ್ಟು ಉತ್ತಮ ವ್ಯವಸ್ಥೆಯಿದೆಯೆಂದು ನಮಗೆ ಹೇಳಲಾಯಿತು. ಆದರೆ ನಮ್ಮ ಆಫರ್ ಈಗಲೂ ಇದ್ದು ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಲು ನಾವು ಸಿದ್ಧರಿದ್ದೇವೆ" ಎಂದು  ವಿಶ್ವ ಸಂಸ್ಥೆ ಮುಖ್ಯಸ್ಥರ ಉಪ ವಕ್ತಾರ ಫರ್ಹಾನ್ ಹಖ್ ಹೇಳಿದ್ದಾರೆ.

ವಿಶ್ವ ಸಂಸ್ಥೆ ಏಜನ್ಸಿಗಳಿಂದ ಯಾವುದಾದರೂ ಅಗತ್ಯ ವಸ್ತುಗಳು ಭಾರತಕ್ಕೆ ತಲುಪುವ ನಿರೀಕ್ಷೆಯಿದೆಯೇ ಎಂಬ ಪ್ರಶ್ನೆಗೆ ಇಲ್ಲಿಯ ತನಕ  ಯಾವುದೇ ಸಹಾಯ ಕೇಳಲಾಗಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News