ಜೆಸಿಐ ಮಂಗಳಗಂಗೋತ್ರಿ ವತಿಯಿಂದ ಊಟ ವಿತರಣೆ

Update: 2021-05-03 12:48 GMT

ಉಳ್ಳಾಲ, ಮೇ 3: ರಾಜ್ಯಾದ್ಯಂತ ಮತ್ತೆ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಉಳ್ಳಾಲ ಭಾಗದ ರಸ್ತೆ ಬದಿಯಲ್ಲಿರುವ ನಿರ್ಗತಿಕ, ಭಿಕ್ಷುಕ, ಪೌರ ಕಾರ್ಮಿಕರಿಗೆ ಜೆಸಿಐ ಮಂಗಳಗಂಗೋತ್ರಿ ವತಿಯಿಂದ ಮಧ್ಯಾಹ್ನದ ಊಟ ವಿತರಿಸಲಾಯಿತು.

ಜೆಸಿಐ ಮಂಗಳಗಂಗೋತ್ರಿ ಸ್ಥಾಪಕ ಅಧ್ಯಕ್ಷ ತ್ಯಾಗಂ ಹರೇಕಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಲಾಕ್‌ಡೌನ್ ಮುಗಿಯುವವರೆಗೆ ಮಧ್ಯಾಹ್ನದ ಊಟ ವಿತರಿಸಲಾಗುವುದು ಎಂದರು.

ಜೆಸಿಐ ಮಂಗಳಗಂಗೋತ್ರಿ ಅಧ್ಯಕ್ಷ ಫ್ರಾಂಕಿ ಪ್ರಾನ್ಸಿಸ್ ಕುಟಿನ್ಹಾ, ವಲಯ ಆಡಳಿತ ಮಂಡಳಿಯ ಸದಸ್ಯ ಬಾದ್‌ಷಾ ಸಾಂಬಾರ್ ದೋಟ, ಪೂರ್ವ ಅಧ್ಯಕ್ಷ ಪ್ರೊ ಪ್ರಶಾಂತ್ ನಾಯ್ಕ್, ಮೋಹನ್ ಶಿರ್ಲಾಲ್, ಪವಿತ್ರಾ ಗಣೇಶ್, ಕಾರ್ಯದರ್ಶಿ ಪ್ರತಿಮಾ ಹೆಬ್ಬಾರ್, ಉಪಾಧ್ಯಕ್ಷೆ ಜಯಲಕ್ಷ್ಮಿ, ಯು.ಆರ್. ಶೆಟ್ಟಿ, ಜೊತೆ ಕಾರ್ಯದರ್ಶಿ ಬಾಬು, ನಿರ್ದೇಶಕಿ ನಳಿನಿ ಗಟ್ಟಿ, ಜಮಾಅತೆ ಇಸ್ಲಾಂ ಹಿಂದ್ ಮಂಗಳೂರು ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್, ಮಹಿಳಾ ಸಂಚಾಲಕಿ ಝೀನತ್ ಹಸನ್, ಟೀಂ ವೆಲ್ಫೇರ್ ಪಾರ್ಟಿಯ ಉಳ್ಳಾಲ ವಿಧಾನ ಸಭಾ ಕ್ಷೇತ್ರ ಮುಖ್ಯಸ್ಥ ಅಬ್ದುಲ್ ಸಲಾಂ ಸಿ.ಎಚ್, ಪದಾಧಿಕಾರಿಗಳಾದ ಮನ್ಸೂರು ಸಿ.ಎಚ್, ಅಸ್ಗರ್, ತೌಸೀಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News