‘ಕೃಷಿ ಸಂಜೀವಿನಿ’ಯೋಜನೆಯ ಸೌಲಭ್ಯ ಪಡೆಯಲು ಸೂಚನೆ

Update: 2021-05-05 17:07 GMT

ಮಂಗಳೂರು, ಮೇ 5: ರೈತರಿಗೆ ಕೃಷಿ ಸಮಸ್ಯೆಗೆ ಪರಿಹಾರ ಪಡೆಯಲು ಅನುಕೂಲವಾಗುವಂತೆ ಕೃಷಿ ಸಂಜೀನಿ ಎಂಬ ನೂತನ ಯೋಜನೆಯು ಜಾರಿಗೆ ಬಂದಿದೆ.

ರೈತರು ತಮ್ಮ ಜಮೀನಿನಲ್ಲಿ ಮಣ್ಣು ಪರೀಕ್ಷೆ, ಕೀಟ ಮತ್ತು ರೋಗಗಳು ಸೇರಿದಂತೆ ಮತ್ತಿತರ ಸಮಸ್ಯೆಗಳು ಕಂಡು ಬಂದಲ್ಲಿ ಉಚಿತ ಸಹಾಯ ವಾಣಿ ಸಂಖ್ಯೆ: 155313ಕ್ಕೆ ಕರೆ ಮಾಡಿದಲ್ಲಿ ತಮ್ಮ ಜಮೀನಿಗೆ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯದ ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಲಿದ್ದಾರೆ.

ಸಹಾಯವಾಣಿ ಸಂಖ್ಯೆ ಸಂಪರ್ಕ ಸಿಗದಿದ್ದಲ್ಲಿ ದೂ.ಸಂ: 0824-243602/2423604ಗೆ ಕರೆ ಮಾಡಿ ರೈತರು ಸದುಪಯೋಗ ಪಡೆಯುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News