ರಾಜ್ಯಕ್ಕೆ ಲಸಿಕೆಗಳನ್ನು ಉಚಿತವಾಗಿ ನೀಡುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಬಂಗಾಳ ಸರಕಾರ

Update: 2021-05-07 12:33 GMT

ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರವು ಏಕರೂಪದ ಲಸಿಕೆ ನೀತಿಗಾಗಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದೆ ಹಾಗೂ  ಇತ್ತೀಚಿನ ಹಂತದ ಲಸಿಕೆಗಳ ಹೊಸ ಭೇದಾತ್ಮಕ ಬೆಲೆ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಕೋರಿದೆ.

ಲಸಿಕೆಗಳು ಲಭ್ಯವಾಗುವಂತೆ ಹಾಗೂ ರಾಜ್ಯಗಳಿಗೆ ಉಚಿತವಾಗಿ ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಂಗಾಳ ಸರಕಾರ ತನ್ನ ಅರ್ಜಿಯಲ್ಲಿ ಆಗ್ರಹಿಸಿದೆ.

ಲಸಿಕೆ ನೀತಿಯ ಕುರಿತಾಗಿ ಸೋಮವಾರ ಸುಪ್ರೀಂ ಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಎಲ್ಲಾ ವಯಸ್ಕರಿಗೆ ಮೇ 1 ರಿಂದ ವ್ಯಾಕ್ಸಿನೇಷನ್ ತೆರೆದಾಗ ಕೇಂದ್ರದ ಹೊಸ ನೀತಿಯಲ್ಲಿ ಭೇದಾತ್ಮಕ ಬೆಲೆಗಳ ಬಗ್ಗೆ ಅನೇಕ ರಾಜ್ಯಗಳು ದೂರು ನೀಡಿವೆ.

ಇಲ್ಲಿಯವರೆಗೆ, ಕೇಂದ್ರವು  ಉತ್ಪಾದಕರಿಂದ ಲಸಿಕೆಗಳನ್ನು ಖರೀದಿಸುತ್ತಿತ್ತು. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆಗಳನ್ನು ರಾಜ್ಯಗಳಿಗೆ ಉಚಿತವಾಗಿ ವಿತರಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News