ಹಲವು ರೈಲುಗಳ ಸಂಚಾರ ರದ್ದು

Update: 2021-05-07 15:51 GMT

ಉಡುಪಿ, ಮೇ 7: ಕೋವಿಡ್-19 ಸಾಂಕ್ರಾಮಿಕದ ಹೆಚ್ಚಳ ಹಾಗೂ ಪ್ರಯಾಣಿಕರ ಕೊರತೆಯ ಕಾರಣದಿಂದ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರವನ್ನು ಪಶ್ಚಿಮ ರೈಲ್ವೆ ಹಾಗೂ ರೈಲ್ವೆ ಮಂಡಳಿ ರದ್ದುಪಡಿಸಲು ನಿರ್ಧರಿಸಿದೆ.

 ಗಾಂಧಿಧಾಮ ಜಂಕ್ಷನ್-ತುರುನಲ್ವೇಲಿ ಜಂಕ್ಷನ್ ಸಾಪ್ತಾಹಿಕ ಹಬ್ಬದ ವಿಶೇಷ ರೈಲು ಸಂಚಾರ ಮೇ 10ರಿಂದ, ತಿರುನಲ್ವೇಲಿ ಜಂಕ್ಷನ್-ಗಾಂಧಿಧಾಮ ಸಾಪ್ತಾಹಿಕ ಹಬ್ಬದ ವಿಶೇಷ ರೈಲು ಸಂಚಾರ ಮೇ 13ರಿಂದ, ಇಂದೋರ್ ಜಂಕ್ಷನ್-ಕೋಚುವೇಲಿ ಸೂಪರ್‌ಫಾಸ್ಟ್ ಸಾಪ್ತಾಹಿಕ ವಿಶೇಷ ರೈಲು ಸಂಚಾರ ಮೇ 11ರಿಂದ ಹಾಗೂ ಕೋಚುವೇಲಿ- ಇಂದೋರ್ ಜಂಕ್ಷನ್ ರೈಲಿನ ಸಂಚಾರ ಮೇ 14ರಿಂದ ಮುಂದಿನ ಪ್ರಕಟಣೆಯವರೆಗೆ ರದ್ದಾಗಲಿದೆ.

ಪೋರ್‌ಬಂದರ್-ಕೋಚುವೇಲಿ ಸೂಪರ್‌ಫಾಸ್ಟ್ ಸಾಪ್ತಾಹಿಕ ರೈಲಿನ ಸಂಚಾರ ಮೇ 13ರಿಂದ ಹಾಗೂ ಕೋಚುವೇಲಿ-ಪೋರ್‌ಬಂದರ್ ಸೂಪರ್‌ಫಾಸ್ಟ್ ಸಾಪ್ತಾಹಿಕ ರೈಲಿನ ಸಂಚಾರ ಮೇ 16ರಿಂದ ರದ್ದಾಗಲಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News