ಬ್ರಹ್ಮಾವರ: ನಾಗರಿಕ ಹಿತರಕ್ಷಣಾ ಸಮಿತಿಯಿಂದ ಕೋವಿಡ್ ಜಾಗೃತಿ, ಸೋಂಕಿತರ ಸೇವೆಗೆ 8 ವಾಹನ

Update: 2021-05-08 14:17 GMT

ಬ್ರಹ್ಮಾವರ, ಮೇ 8: ಬ್ರಹ್ಮಾವರ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಕೋವಿಡ್-19ರ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಪ್ರಚಾರಾಂದೋಲನ ಹಾಗೂ ಅನಾರೋಗ್ಯ ಪೀಡಿತರ ಸೇವೆಗಾಗಿ ಎಂಟು ವಾಹನಗಳನ್ನು ಉಚಿತವಾಗಿ ನೀಡಲಾಯಿತು.

ಬ್ರಹ್ಮಾವರದಲ್ಲಿ ಇಂದು ಆರಕ್ಷಕ ಸಿಬ್ಬಂದಿಗಳ ಸಮ್ಮುಖದಲ್ಲಿ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ ಬಾರಕೂರು ಆಂದೋಲನಕ್ಕೆ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಉಮೇಶ ಪೂಜಾರಿ, ಗೌರವ ಅಧ್ಯಕ್ಷ ಮಂದಾರ ಶೆಟ್ಟಿ, ಮಹ್ಮಮದ್ ಅಲಿ, ಹರಿಶ್ಚಂದ್ರ, ಕೃಷ್ಣ ಶೇರಿಗಾರ್, ಗೋಪು ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಗಣಪತಿ ಮಟಪಾಡಿ, ಭಾಸ್ಕರ್ ಕಾಮತ್, ಚಂದ್ರಶೇಖರ, ಗಿರೀಶ್ ನಂದಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News