ಕ್ಷೌರಿಕರಿಗೆ ವಿಶೇಷ ಪ್ಯಾಕೇಜ್‌ಗೆ ಮನವಿ

Update: 2021-05-17 13:58 GMT

ಉಡುಪಿ, ಮೇ 17: ಈ ಬಾರಿಯ ಸತತ ಕಠಿಣ ಲಾಕ್‌ಡೌನ್‌ನಿಂದ ಕ್ಷೌರಿಕ ರಿಗೆ ಮಾಡಲು ಕೆಲಸವಿಲ್ಲದೆ ಬದುಕು ತೀರಾ ಸಂಕಷ್ಟಕ್ಕೆ ಸಿಲುಕಿದೆ. ಸರಕಾರದ ಆದೇಶವನ್ನು ಅಕ್ಷರಶ: ಪಾಲಿಸಿ ಅವರ ಹಾಗೂ ಅವರ ಕುಟುಂಬ ಚಿಂತಾಜನಕ ಸ್ಥಿತಿಯಲ್ಲಿದೆ. ಹೀಗಾಗಿ ಇವರಿಗೆ ಸರಕಾರ ಸಹಾಯ ಧನದ ವಿಶೇಷ ಪ್ಯಾಕೇಜ್‌ನ್ನು ನೀಡಬೇಕು ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.

ದಿನಗೂಲಿ ನೌಕರರಂತೆ ದುಡಿಯುವ ಕ್ಷೌರಿಕರು ಈಗ ಮಾಡಲು ಕೆಲಸವಿಲ್ಲದೆ ಅಂಗಡಿ ಬಾಡಿಗೆ, ಮನೆ ಬಾಡಿಗೆ, ಹಿರಿಯರ ಔಷಧೋಪಚಾರ, ದಿನನಿತ್ಯದ ಖರ್ಚು ಭರಿಸಲಾರದೇ ಕಂಗಾಲಾಗಿದ್ದಾರೆ. ಅವರಿಗೆ ಉಚಿತ ಆರೋಗ್ಯ ಸೇವೆಯ ಚಿಕಿತ್ಸೆ ನೀಡುವುದರೊಂದಿಗೆ, ಕನಿಷ್ಠ 10,000ರೂ.ಗಳ ಸಹಾಯಧನ, ಆಹಾರ ಕಿಟ್‌ಗಳ ಪ್ಯಾಕೇಜ್‌ಗಳನ್ನು ನೀಡುವಂತೆ ಸಂಘ ಮನವಿಯಲ್ಲಿ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News