ಕಾಪು : ​ಮೊಬೈಲ್ ನೀಡದಕ್ಕೆ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆ

Update: 2021-05-17 16:31 GMT

ಕಾಪು, ಮೇ 18: ವೀಡಿಯೊ ಗೇಮ್ ಆಡಲು ಮೊಬೈಲ್ ನೀಡದ ಕಾರಣಕ್ಕೆ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟಪಾಡಿ ಮಣಿಪುರ ಗ್ರಾಮದಲ್ಲಿ ನಡೆದಿದೆ.

ಕಟಪಾಡಿ ಮಣಿಪುರ ಗ್ರಾಮದ ಕೋಟೆ ನಿವಾಸಿ ಶಾಬನ್ ಎಂಬವರ ಪುತ್ರಿ ಸುಹೇಬತ್ ಅಸ್ಲಮೀಯಾ (16) ಮೃತ ಬಾಲಕಿ. ಪ್ರತಿದಿನ ಮೊಬೈಲ್‌ನಲ್ಲಿ ಆಡುತ್ತಿದ್ದಳೆನ್ನಲಾಗಿದೆ. ಈ ಬಗ್ಗೆ ಆಕೆಗೆ ತಂದೆತಾಯಿ ಬುದ್ದಿ ಹೇಳಿದರೂ ಕೇಳದೆ ಮನೆಯಲ್ಲಿ ಹಠ ಮಾಡಿಕೊಳ್ಳುತ್ತಿದ್ದಳು. ಮೇ 15ರಂದು ರಾತ್ರಿ ಆಕೆ ಮನೆಯಲ್ಲಿ ಮೊಬೈಲ್ ನಲ್ಲಿ ಆಟ ಆಡುತ್ತಿದ್ದು, ಈ ಬಗ್ಗೆ ತಾಯಿ ಮೊಬೈಲ್ ನಲ್ಲಿ ಆಟ ಆಡದಂತೆ ಬುದ್ದಿ ಹೇಳಿ ಮೊಬೈಲ್ ಆಕೆ ಯಿಂದ ಕಿತ್ತುಕೊಂಡರು ಎನ್ನಲಾಗಿದೆ. ಇದೇ ಸಿಟ್ಟಿನಲ್ಲಿ ಆಕೆ ಮನೆಯಿಂದ 200 ಮೀ. ದೂರದಲ್ಲಿರುವ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News