ಮೇ 18ರಂದು ಕಂದಾಯ ಸಚಿವರು ಉಡುಪಿಗೆ

Update: 2021-05-17 16:38 GMT

ಉಡುಪಿ, ಮೇ 17: ರಾಜ್ಯ ಕಂದಾಯ ಸಚಿವ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್. ಅಶೋಕ್ ಮೇ 18ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು ತೌಕ್ತೆ ಚಂಡಮಾರುತದಿಂದ ಆದ ಹಾನಿಯನ್ನು ಪರಿಶೀಲಿಸಲಿದ್ದಾರೆ.

ಸಚಿವರು ಬೆಳಗ್ಗೆ 11:45ಕ್ಕೆ ಮರವಂತೆಯಲ್ಲಿ ಕಡಲ್ಕೊರೆತ ಸ್ಥಳಗಳ ವೀಕ್ಷಣೆ ನಡೆಸುವರು. ಅಪರಾಹ್ನ 12:45ಕ್ಕೆ ಕಾಪುವಿನಲ್ಲಿ ತೌಕ್ತೆ ಚಂಡ ಮಾರುತದಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ಮತ್ತು ಸಭೆ ನಡೆಸಿ ನಂರ ಮಂಗಳೂರಿಗೆ ತೆರಳುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News