ಉಡುಪಿ ಮಲಬಾರ್ ಗೋಲ್ಡ್ ನಿಂದ ಪಡಿತರ ಕಿಟ್ ವಿತರಣೆ

Update: 2021-05-18 07:39 GMT

ಹೆಬ್ರಿ, ಮೇ 18: ಮುದ್ರಾಡಿ ಗ್ರಾಮದ ಬಲ್ಲಾಡಿ ಈಶ್ವರ ನಗರ ಮತ್ತು ಕಬ್ಬಿನಾಲೆಯ ಕೊಂಕನಾರಬೆಟ್ಟು ಹಾಗೂ ಹೆಬ್ರಿ ಗ್ರಾಮದ ಬಚ್ಚಿಪ್ಪಿನ ಜನತಾ ಕಾಲನಿ, ಆರ್ಡಿಯ ಒಟ್ಟು 118 ಅರ್ಹ ಫಲಾನುಭವಿ ಕುಟುಂಬಗಳಿಗೆ ಉಡುಪಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ ಲಾಕೌ ಡೌನ್ ಪಡಿತರ ಕಿಟ್ ವಿತರಿಸಲಾಯಿತು.

ಮುದ್ರಾಡಿ ಗ್ರಾಮದ ಧರ್ಮಸ್ಥಳ ಯೋಜನೆಯ ಒಕ್ಕೂಟದ ಅಧ್ಯಕ್ಷ ಹರೀಶ್ ಕುಲಾಲ್ ಮತ್ತು ಸಮಾಜ ಸೇವಕರಾದ ಕೃಷ್ಣ ಆಚಾರಿ ಹಾಗೂ ದೀಪಿಕಾ ಭಟ್ ಕಿಟ್‌ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಜಿ.ಆರ್.ಎಂ ರಾಘವೇಂದ್ರ ನಾಯಕ್, ಮೆನೇಜರ್ ಗುರುರಾಜ್ ಕುಲಾಲ್, ತಂಝೀಮ್ ಶಿರ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News