ಕಾಸರಗೋಡು: ವಿದ್ಯುತ್ ಆಘಾತಕ್ಕೆ ನಿವೃತ್ತ ಶಿಕ್ಷಕ ಬಲಿ

Update: 2021-05-27 11:57 GMT
ಮುರಳೀಧರ

ಕಾಸರಗೋಡು: ವಿದ್ಯುತ್ ತಗಲಿ ಶಿಕ್ಷಕರೋರ್ವರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಗರ ಹೊರವಲಯದ ಕೂಡ್ಲು ಎಂಬಲ್ಲಿ ನಡೆದಿದೆ.

ಕೂಡ್ಲು ನಿವಾಸಿ ಮುರಳೀಧರ (57 ) ಮೃತಪಟ್ಟವರು.

ಪಟ್ಲ ಸರಕಾರಿ ಶಾಲೆಯ ಹಿಂದಿ ಶಿಕ್ಷಕರಾಗಿದ್ದರು. ಒಂದು ವರ್ಷದ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಮೋಟಾರ್ ಪಂಪ್ ನಿಂದ ಶಾಕ್ ತಗಲಿ ಈ ಘಟನೆ ನಡೆದಿದೆ.

ಶಾಕ್ ತಗಲಿ ಗಂಭೀರ ಸ್ಥಿತಿಯಲ್ಲಿದ್ದ ಮುರಳೀಧರ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು. ಚೆರ್ಕಳ ನಿವಾಸಿಯಾಗಿದ್ದ ಮುರಳೀಧರ ಅವರು ಕೆಲ ಸಮಯಗಳಿಂದ ಕೂಡ್ಲುವಿನಲ್ಲಿ  ವಾಸವಾಗಿದ್ದರು. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News