ಶಿರೂರು ಗಡಿಭಾಗದಲ್ಲಿ ಕಳ್ಳದಾರಿಯ ಸಂಚಾರಕ್ಕೆ ಕಡಿವಾಣ

Update: 2021-06-06 14:26 GMT

ಬೈಂದೂರು, ಜೂ. 6: ಕಳೆದ ಹಲವು ದಿನಗಳಿಂದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಉಡುಪಿ ಜಿಲ್ಲೆಯ ಗಡಿಭಾಗವಾದ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿಯ ಕಳ್ಳದಾರಿಯಲ್ಲಿ ನಡೆಯುತ್ತಿರುವ ವಾಹನ ಸಂಚಾರಕ್ಕೆ ಬೈಂದೂರು ತಶೀಲ್ದಾರ್ ಇದೀಗ ಕಡಿವಾಣ ಹಾಕಿದ್ದಾರೆ.

ಈ ದಾರಿಯಲ್ಲಿ ಹೊರ ಜಿಲ್ಲೆಯವರು ಪೋಲಿಸರಿಗೆ ಚಳ್ಳೆ ಹಣ್ಣು ತಿನಿಸಿ ಅಕ್ರಮವಾಗಿ ತಿರುಗಾಟ ನಡೆಸುತ್ತಿರುವುದು ಕಂಡು ಬಂದಿದ್ದು ಈ ಮಾಹಿತಿ ತಿಳಿದ ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮಿ, ಈ ರಸ್ತೆಯ ಮಧ್ಯೆ ಜೆಸಿಬಿ ಮೂಲಕ ಹೊಂಡ ನಿರ್ಮಿಸಿ, ವಾಹನಗಳು ಓಡಾಟ ನಡೆಸದಂತೆ ತಡೆ ಹಾಕಿದ್ದಾರೆ.

ಈ ಸಂಧರ್ಭದಲ್ಲಿ ಐ.ಆರ್.ಬಿ ಸಿಬ್ಬಂದಿ ದೀಪಕ್ ಶೆಟ್ಟಿ ಶಿರೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News