ಶಿರ್ವ: ಮಲಬಾರ್ ಗೋಲ್ಡ್ ನಿಂದ ಪಡಿತರ ಕಿಟ್ ವಿತರಣೆ

Update: 2021-06-13 14:50 GMT

ಶಿರ್ವ, ಜೂ.13: ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಿರ್ವ ಗ್ರಾಪಂ ವ್ಯಾಪ್ತಿಯ ಅರ್ಹರಿಗೆ ಪಡಿತರ ಕಿಟ್‌ಗಳನ್ನು ಶಿರ್ವ ಠಾಣಾಧಿಕಾರಿ ಶ್ರೀಶೈಲ ಮುಂಡು ಗೋಡ ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್‌ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಆರ್.ಪಾಟ್ಕರ್, ಲಾಕ್‌ಡೌನ್‌ನಿಂದ ಉದ್ಯೋಗವಿಲ್ಲದ ಸಂಕಷ್ಟದಲ್ಲಿದ್ದಾಗ ಜನರ ಕಷ್ಟಗಳಿಗೆ ಸ್ಪಂದಿಸಿ, ಉಡುಪಿಯ ಮಲಬಾರ್ ಗೋಲ್ಡ್ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಆಹಾರ ಕಿಟ್ಗಳನ್ನು ನೀಡಿ ಬಡ ಜನರಿಗೆ ನೆರವಾಗುತ್ತಿರವುದು ಪ್ರಶಂಸನೀಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿರ್ವ ಗ್ರಾಪಂ ಸದಸ್ಯ ಪ್ರವೀಣ್, ಉಡುಪಿ ಮಲಬಾರ್ ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ, ರಾಘವೇಂದ್ರ ಭಟ್, ತಸ್ಲಿಮ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News