ಕಾರ್ಕಳ: ರಸ್ತೆಯ‌ ಹೊಂಡದಲ್ಲಿ ಗಿಡ‌ ನೆಡುವ ಮೂಲಕ ವಿನೂತನ ಪ್ರತಿಭಟನೆ

Update: 2021-06-15 11:11 GMT

ಕಾರ್ಕಳ: ಮಂಗಳೂರು ರಸ್ತೆಯಲ್ಲಿರುವ ಟಿ.ಎ‌.ಪಿ‌.ಎಂ.ಸಿ ಮುಂಭಾಗದ‌ ರಸ್ತೆಯ‌  ಹೊಂಡದಲ್ಲಿ ಗಿಡ ನೆಡುವ ಮೂಲಕ ಯುವ ಕಾಂಗ್ರೆಸ್ ವಿನೂತನವಾಗಿ ಪ್ರತಿಭಟನೆ ನಡೆಸಿದೆ.

ಚಿನ್ನದ ರಸ್ತೆಯ ಆಸೆ ತೋರಿಸಿದವರು ಗುಂಡಿ ಭಾಗ್ಯವನ್ನು ಕರುಣಿಸುತ್ತಿದ್ದಾರೆ. ಅಸಮರ್ಪಕ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಅಹಾರ ಕಿಟ್ಟನ್ನು ನೀಡುವ ಬದಲಿಗೆ ಬೆಂಡೆ ಬೀಜವನ್ನು ನೀಡಿ ಜನರಿಗೆ ಮೂರ್ಖರನ್ನಾಗಿಸುವ ಪ್ರಯತ್ನ ನಡೆಯುತಿದೆ ಎಂದು ಶಾಸಕ ಸುನೀಲ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ‌ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪುರಸಭಾ ಸದಸ್ಯ ಶುಭದರಾವ್, ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಎ ಶೆಟ್ಟಿ ಬಜಗೋಳಿ, ಪ್ರದೀಪ್ ‌ಶೆಟ್ಟಿ‌ ನಲ್ಲೂರು, ರಾಜೇಂದ್ರ, ಶಾಮ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News