ಅಧಿಕ ಮೌಲ್ಯದ ಜಮೀನಿಗೆ ಹೆಚ್ಚು ಬೆಲೆ ಪಾವತಿ: ರಾಮಮಂದಿರ ವಿವಾದಕ್ಕೆ ಟ್ರಸ್ಟ್ ಸ್ಪಷ್ಟನೆ

Update: 2021-06-15 17:31 GMT

ಹೊಸದಿಲ್ಲಿ, ಜೂ.15: ಅಯೋಧ್ಯೆ ರಾಮಮಂದಿರದ ಭೂಮಿ ಖರೀದಿಗೆ ಸಂಬಂಧಿಸಿದ ವಿವಾದಕ್ಕೆ ಸ್ಪಷ್ಟನೆ ನೀಡಿರುವ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ಈ ಜಮೀನು ಅತ್ಯಂತ ಬೆಲೆಬಾಳುವ ಕಾರಣ ಅಧಿಕ ಮೊತ್ತ ನೀಡಿ ಖರೀದಿಸಲಾಗಿದೆ ಎಂದಿದೆ. 

ರಾಮಮಂದಿರದ ರಸ್ತೆಗೆ ಸಮೀಪದ ಈ ಜಮೀನು ಅಧಿಕ ಮೌಲ್ಯ ಹೊಂದಿದೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದು, ಜಮೀನಿಗೆ ಸಂಬಂಧಿಸಿದ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದಿದ್ದಾರೆ. ಜಮೀನಿನ ಬೆಲೆಯಲ್ಲಿರುವ ವ್ಯತ್ಯಾಸಕ್ಕೆ ಕಾರಣಗಳನ್ನು ವಿವರಿಸಿದ ವರದಿಯಲ್ಲಿ ಕೇಂದ್ರ ಸರಕಾರ, ಬಿಜೆಪಿ ಮತ್ತು ಆರೆಸ್ಸೆಸ್ ಗೆ ರವಾನಿಸಲಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News