ವಿಶಾಖಪಟ್ಟಣಂ: ಎನ್ ಕೌಂಟರ್'ನಲ್ಲಿ ಆರು ಮಾವೋವಾದಿಗಳ ಹತ್ಯೆ
ವಿಶಾಖಪಟ್ಟಣಂ: ಜಿಲ್ಲೆಯ ಕೊಯ್ಯೂರ್ ಮಂಡಲದ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಗ್ರೇಹೌಂಡ್ಸ್ ಸಿಬ್ಬಂದಿಯೊಂದಿಗೆ ಬುಧವಾರ ಬೆಳಿಗ್ಗೆ ನಡೆದ ಎನ್ಕೌಂಟರ್ನಲ್ಲಿ ಕನಿಷ್ಠ ಆರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹತ್ಯೆಗೀಡಾದ ಮಾವೋವಾದಿಗಳಲ್ಲಿ ಒಬ್ಬನನ್ನು ತೆಲಂಗಾಣ ರಾಜ್ಯ ಮೂಲದ ಡಿಸಿಎಂ ಕಮಾಂಡರ್ ಎಂದು ಗುರುತಿಸಲಾಗಿದೆ .
ಕೊಯ್ಯೂರ್ ಮಂಡಲ್ ಕಾಡುಗಳಲ್ಲಿ ಕೆಲವು ಪ್ರಮುಖ ಮಾವೋವಾದಿ ನಾಯಕರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿಯ ನಂತರ ಗ್ರೇಹೌಂಡ್ಸ್ ಸಿಬ್ಬಂದಿ ಆ ಪ್ರದೇಶವನ್ನು ಕೊಂಬಿಂಗ್ ನಡೆಸುತ್ತಿದ್ದರು. ಮಾಂಪಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟೀಗಲಮೆಟ್ಟಾ ಬಳಿ ಗ್ರೇಹೌಂಡ್ಸ್ ಸಿಬ್ಬಂದಿ ಮಾವೋವಾದಿಗಳ ಗುಂಪನ್ನು ಕಂಡಾಗ ಗುಂಡಿನ ವಿನಿಮಯ ನಡೆಯಿತು ಎಂದು ವರದಿಯಾಗಿದೆ.
ಗುಂಡಿನ ವಿನಿಮಯದಲ್ಲಿ ಆರು ಮಾವೋವಾದಿಗಳು ಸಾವನ್ನಪ್ಪಿದ್ದರೆ, ಇನ್ನೂ ಕೆಲವರು ದಟ್ಟ ಕಾಡುಗಳಿಗೆ ಓಡಿಹೋದರು ಎಂದು ವರದಿಯಾಗಿದೆ. ಪೊಲೀಸರು ಸ್ಥಳದಿಂದ ಎಕೆ 47, ಕೆಲವು ರಿವಾಲ್ವರ್ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.