ಹಿರಿಯ ನಟ ಚಂದ್ರಶೇಖರ್ ನಿಧನ

Update: 2021-06-16 17:32 GMT

ಮುಂಬೈ, ಜೂ. 16: ಹಿರಿಯ ನಟ ಚಂದ್ರಶೇಖರ್ (98) ಅವರು ವೃದ್ಧಾಪ್ಯ ಸಂಬಂಧಿ ಖಾಯಿಲೆಯಿಂದ ಮುಂಬೈಯಲ್ಲಿ ಬುಧವಾರ ನಿಧನರಾಗಿದ್ದಾರೆ. ಜನಪ್ರಿಯ ಟಿವಿ ಧಾರಾವಾಹಿ ರಾಮಾಯಣದಲ್ಲಿ ಆರ್ಯ ಸುಮಂತ ಪಾತ್ರದಲ್ಲಿ ನಟಿಸಿ ಚಂದ್ರಶೇಖರ್ ಅವರು ಜನಪ್ರಿಯರಾಗಿದ್ದರು. ಕಿರಿಯ ಕಲಾವಿದನಾಗಿ ತನ್ನ ವೃತ್ತಿ ಜೀವನ ಆರಂಭಿಸಿದ ಅವರು 250ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸುರಾಂಗ್, ಕವಿ, ಮಸ್ತಾನ, ಬಸಂತ್ ಬಹಾರ್, ಖಾಲಿ ಟೋಪಿ ಲಾಲ್ ರುಮಾಲ್ ಹಾಗೂ ಬರ್ಸಾತ್ ಕಿ ರಾತ್ ಅವರು ನಟಿಸಿದ ಕೆಲವು ಜನಪ್ರಿಯ ಚಿತ್ರಗಳು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News