ದೇಶದ್ರೋಹ ಪ್ರಕರಣ: ಆಯಿಶಾ ಸುಲ್ತಾನಾಗೆ ಮಧ್ಯಂತರ ಜಾಮೀನು ನೀಡಿದ ಕೇರಳ ಹೈಕೋರ್ಟ್‌

Update: 2021-06-17 10:46 GMT

ಕೊಚ್ಚಿ: ಲಕ್ಷದ್ವೀಪದ ಆಡಳಿತಾಧಿಕಾರಿಯನ್ನ ʼಕೇಂದ್ರ ಸರಕಾರ ಸ್ಥಾಪಿಸಿದ ಜೈವಿಕ ಅಸ್ತ್ರʼ ಎಂದಿದ್ದಕ್ಕೆ ಸಿನಿಮಾ ನಿರ್ಮಾಪಕಿ ಹಾಗೂ ನಟಿ ಆಯಿಶಾ ಸುಲ್ತಾನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಈ ಕುರಿತಾದಂತೆ ಆಯಿಶಾ ಕೇರಳ ಹೈಕೋರ್ಟ್‌ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್‌ ಒಂದು ವಾರಗಳ ಮಧ್ಯಂತರ ಜಾಮೀನು ನೀಡಿ ಆದೇಶಿಸಿದೆ ಎಂದು ತಿಳಿದು ಬಂದಿದೆ.

ಆಯಿಶಾ 41ಎ ಸಿಆರ್ಪಿಸಿ ನೋಟಿಸ್‌ ಪ್ರಕಾರ ಪೊಲೀಸ್‌ ವಿಚಾರಣೆಗಾಗಿ ಹಾಜರಾಗಬೇಕು ಎಂದು ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News