ವೆಳ್ಳಿಯಾಡ್: ಕೆರೆಗೆ ಬಿದ್ದು ಯುವಕ ಮೃತ್ಯು

Update: 2021-06-19 04:47 GMT

ಕಾಸರಗೋಡು, ಜೂ.19: ಕೆರೆಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಮೇಲ್ಪರಂಬದ ವೆಳ್ಳಿಯಾಡ್ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿರುವುದು ವರದೊಯಾಗಿದೆ.

ಮೃತರನ್ನು ನೆಲ್ಲಿಕಟ್ಟೆ ನಿವಾಸಿ ಮುಹಮ್ಮದ್ ಕೈಫ್(18) ಎಂದು ಗುರುತಿಸಲಾಗಿದೆ.
ಟೈಲ್ಸ್ ಹಾಕುವ ಕಾರ್ಮಿಕನಾಗಿ ದುಡಿಯುತ್ತಿದ್ದ ಕೈಫ್ ಉದುಮದಲ್ಲಿ ಕೆಲಸ ಮುಗಿಸಿ ಸಂಜೆ ಮೇಲ್ಪರಂಬದ ಸಂಬಂಧಿಕರ ಮನೆಗೆ ಬಂದಿದ್ದು, ಈ ವೇಳೆ ಘಟನೆ ಸಂಭವಿಸಿದೆ.

ಕೈಫ್ ಮನೆ ಸಮೀಪದ ಕೆರೆಗೆ ಆಕಸ್ಮಿಕವಾಗಿ ಬಿದ್ದಿದ್ದು, ಜೊತೆಗಿದ್ದವರು ಅವರನ್ನು  ಮೇಲಕ್ಕೆತ್ತಿ  ದೇಳಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News