ದಾರುನ್ನೂರ್ ಯುಎಇ: 6 ನೇ ವಾರ್ಷಿಕ ಸಭೆ, ನೂತನ ಸಮಿತಿ ರಚನೆ

Update: 2021-06-22 05:28 GMT

ದುಬೈ : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಯುಎಇ ರಾಷ್ಟ್ರೀಯ ಸಮಿತಿಯ 6ನೇ ವಾರ್ಷಿಕ ಮಹಾ ಸಭೆಯು ದೇರಾ ದುಬೈಯಲ್ಲಿರುವ ಓರಿಯಂಟಲ್ ಕಾರ್ನರ್ ಹೋಟೆಲ್ ನಲ್ಲಿ  ಸಂಶುದ್ದೀನ್ ಸೂರಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ವೇದಿಕೆಯಲ್ಲಿ  ಅಬ್ದುಲ್ ಸಲಾಂ ಬಾಖವಿ ಸಮಸ್ತ ಕೇಂದ್ರ ಮುಶಾವರ ಸದಸ್ಯರು ಮತ್ತು ಅಧ್ಯಕ್ಷರು ದುಬೈ ಸುನ್ನಿ ಸೆಂಟರ್ , ದಾರುನ್ನೂರ್ ಉಪದೇಶಕ ಸಮಿತಿ ಸದಸ್ಯರುಗಳಾದ ಸಯ್ಯದ್ ಆಸ್ಕರ್ ಅಲಿ ತಂಙಳ್,  ಸಂಶುದ್ದೀನ್ ಕಲ್ಕಾರ್, ಮುಹಿದ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ, ಅಶ್ರಫ್ ಖಾನ್ ಮಾಂತೂರ್, ಗೌರವಾಧ್ಯಕ್ಷರಾದ ಮಹಮ್ಮದ್ ಮುಸ್ತಾಕ್ ಕದ್ರಿ, ಶಾರ್ಜಾ ಸ್ಟೇಟ್ ಸಮಿತಿ ಅಧ್ಯಕ್ಷ ಮಹಮ್ಮದ್ ಆಶ್ರಫ್ ಬಾಳೆಹಣ್ಣೂರ್  , ಉಪಾಧ್ಯಕ್ಷರಾದ ಮಹಮ್ಮದ್ ಮಾಡಾವು, ಧಾರ್ಮಿಕ ಸಲಹೆಗಾರರಾದ ಸುಲೈಮಾನ್ ಮೌಲವಿ ಕಲ್ಲೆಗ  ಮೊದಲಾದವರು ಉಪಸ್ಥಿತರಿದ್ದರು.

ದುಆ ಕಾರ್ಯವನ್ನು ಅಬ್ದುಲ್ ಸಲಾಮ್ ಬಾಖವಿ ನೆರವೇರಿಸಿದರು.  ಸ್ವಾಗತವನ್ನು ದಾರುನ್ನೂರ್ ಯುಎಇ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ಕೋರಿದರು.

ಕಾರ್ಯಕ್ರಮವನ್ನು ಅಬ್ದುಲ್ ಸಲಾಂ ಬಾಖವಿ ಉದ್ಘಾಟಿಸಿ, ಮಾಡಿದರು.

ಈ ಸಂದರ್ಭ ದಾರುನ್ನೂರ್ ಅಧ್ಯಕ್ಷರು, ಗೌರವಾಧ್ಯಕ್ಷರು ಮತ್ತು  ಉಪದೇಶಕರಿಂದ  ಉಸ್ತಾದ್ ರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ದಾರುನ್ನೂರ್ ಯುಎಇಯಲ್ಲಿ  2020ರ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಣೆ ಮತ್ತು ಉತ್ತಮ ಸಹಕಾರವನ್ನು ಪರಿಗಣಿಸಿ ಮಹಮ್ಮದ್ ಅಶ್ರಫ್ ಬಾಳೆಹಣ್ಣೂರ್ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸ್ಟೇಟ್ ಸಮಿತಿಗಳ ಕಾರ್ಯನಿರ್ವಹಣೆಯಲ್ಲಿ ಶಾರ್ಜಾ ಸ್ಟೇಟ್ ಪ್ರಥಮ, ದುಬೈ ಸ್ಟೇಟ್ ದ್ವಿತೀಯ ಮತ್ತು ಅಬುಧಾಬಿ ಸ್ಟೇಟ್ ತೃತೀಯ ಸ್ಥಾನಗಳನ್ನು ಪಡೆದಿದ್ದು, ಆಯಾ ಸ್ಟೇಟ್ ಪ್ರಮುಖರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ವಾರ್ಷಿಕ ವರದಿಯಯನ್ನು ಕಾರ್ಯದರ್ಶಿ ಮಹಮ್ಮದ್ ರಫೀಕ್ ಸುರತ್ಕಲ್ ವಾಚಿಸಿದರು.

ವಾರ್ಷಿಕ ಆಯವ್ಯಯಗಳ ಲೆಕ್ಕವನ್ನು  ಲೆಕ್ಕ ಪರಿಶೋಧಕ ಅನ್ಸಾಫ್ ಪಾತೂರ್ ಮಂಡಿಸಿದರು. ಬಳಿಕ ವರದಿ ಮತ್ತು ಲೆಕ್ಕ ಪತ್ರವನ್ನು ಅಧ್ಯಕ್ಷರಾದ ಸಂಶುದ್ದೀನ್ ಸೂರಲ್ಪಾಡಿ ಅವಲೋಕಿಸಿ, ವಿವರಣೆ ನೀಡಿದರು.

ಸಯ್ಯದ್ ಅಸ್ಕರ್ ಅಲಿ ತಂಙಳ್, ಸಂಶುದ್ದೀನ್ ಕಲ್ಕಾರ್, ಮಹಮ್ಮದ್ ಮುಸ್ತಾಕ್ ಕದ್ರಿ, ಮಹಮ್ಮದ್ ಅಶ್ರಫ್ ಬಾಳೆಹಣ್ಣೂರ್, ಅಶ್ರಫ್ ಖಾನ್ ಮಾಂತೂರ್, ಉಸ್ತಾದ್ ಸುಲೈಮಾನ್ ಮೌಲವಿ ಕಲ್ಲೆಗ, ಮಹಮ್ಮದ್ ಮಾಡಾವು, ಮುಹಿಯ್ಯಿದ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ ಮೊದಲಾದವರು ದಾರುನ್ನೂರ್ ನೀಡುವ ವಿದ್ಯಾಭ್ಯಾಸದ ಗುಣಮಟ್ಟ ಮತ್ತು ಕಾರ್ಯವೈಖರಿ ಬಗ್ಗೆ ವಿವರಿಸಿದರು.

2021ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಮುಖ್ಯ ಪೋಷಕರು –  ನಿಸಾರ್ ಅಹ್ಮದ್ ಕಾರ್ಕಳ, ಪೋಷಕರು  - ಅಬ್ದುಲ್ಲಾ ಹಾಜಿ ಮದುಮೂಲೆ, ಅಹ್ಮದ್ ಮತೀನ್ ಚಿಲ್ಮಿ ಮಂಗಳೂರು, ಪ್ರಮುಖ ಧಾರ್ಮಿಕ ಸಲಹೆಗಾರ   - ಉಸ್ತಾದ್ ಅಬ್ದುಲ್ ಸಲಾಂ ಬಾಖವಿ, ಪ್ರಮುಖ ಸಲಹೆಗಾರ  - ಸಲೀಂ ಅಲ್ತಾಫ್ ಫರಂಗಿಪೇಟೆ, ಸಲಹಾ ಸಮಿತಿ ಪ್ರಮುಖರು – ಸಯ್ಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ, ಮುಹಿದ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ, ಸಂಶುದ್ದೀನ್ ಕಲ್ಕಾರ್, ಉಸ್ತಾದ್ ಶೌಕತ್ ಅಲಿ ಹುದವಿ, ಮುಹ್ಸಿನ್ ಅಹ್ಮದ್ ಮೂಡುಬಿದಿರೆ, ಇಕ್ಬಾಲ್ ಬಾವ ಬಂಟ್ವಾಳ್, ಅಶ್ರಫ್ ಖಾನ್ ಮಾಂತೂರ್ , ಯೂಸುಫ್ ಈಶ್ವರಮಂಗಲ, ಬಶೀರ್ ಬಂಟ್ವಾಳ್, ಅಡ್ವೋಕೇಟ್ ಇಬ್ರಾಹಿಂ ಖಲೀಲ್, ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ, ಮಹಮ್ಮದ್ ಕಲ್ಲಾಪು,  ಜಬ್ಬಾರ್ ಎಡನೀರ್.

ಗೌರವಾಧ್ಯಕ್ಷರು  - ಮಹಮ್ಮದ್ ಮುಸ್ತಾಕ್ ಕದ್ರಿ, ಅಧ್ಯಕ್ಷರು  - ಸಂಶುದ್ದೀನ್ ಸೂರಲ್ಪಾಡಿ, ಉಪಾಧ್ಯಕ್ಷರು – ಅಬ್ದುಲ್ ರವೂಫ್ ಹಾಜಿ ಕೈಕಂಬ, ಮಹಮ್ಮದ್ ರಫೀಕ್ ಆತೂರು, ಮಹಮ್ಮದ್ ಅಶ್ರಫ್ ಬಾಳೆಹಣ್ಣೂರ್ , ಮಹಮ್ಮದ್ ಮಾಡಾವು, ಪ್ರಧಾನ ಕಾರ್ಯದರ್ಶಿ – ಬದ್ರುದ್ದೀನ್ ಹೆಂತಾರ್, ಕಾರ್ಯದರ್ಶಿ– ಮಹಮ್ಮದ್ ಸಾಜಿದ್ ಬಜ್ಪೆ, ಮಹಮ್ಮದ್ ಶಬೀರ್ ಸಕಲೇಶಪುರ, ಅಶ್ರಫ್ ಪರ್ಲಡ್ಕ, ಕೋಶಾಧಿಕಾರಿ - ಅಬ್ದುಲ್ ಸಲಾಂ ಬಪ್ಪಳಿಗೆ, ಕೋರ್ಡಿನೇಟರ್ – ಮಹಮ್ಮದ್ ರಫೀಕ್ ಸುರತ್ಕಲ್, ಲೆಕ್ಕ ಪರಿಶೋಧಕ - ಅನ್ಸಾಫ್ ಪಾತೂರ್, ಸಹ ಲೆಕ್ಕ ಪರಿಶೋಧಕ – ನಾಸಿರ್ ಬಪ್ಪಳಿಗೆ, ಸಂಘಟನೆ ಕಾರ್ಯದರ್ಶಿ  - ನವಾಝ್ ಬಿ.ಸಿರೋಡ್, ಮೀಡಿಯಾ ಕೋರ್ಡಿನೇಟರ್ – ಸಿರಾಜ್ ಬಿ.ಸಿ ರೋಡ್ , ಅಶ್ರಫ್ ಬಾಂಬಿಲ, ಧಾರ್ಮಿಕ ಸಲಹೆಗಾರ  - ಉಸ್ತಾದ್  ಸುಲೈಮಾನ್ ಮೌಲವಿ ಕಲ್ಲೆಗ , ಸಾಹುಲ್ ಬಿ.ಸಿರೋಡ್, ಕನ್ವೀನರ್ - ನೂರ್ ಮಹಮ್ಮದ್ ನೀರ್ಕಜೆ, ಅಬ್ದುಲ್ ಖಾದರ್ ಬೈತಡ್ಕ , ಹನೀಫ್ ಕೆ.ಪಿ ಮೂಡಬಿದ್ರಿ, ಸುಹೈಲ್ ಹಸನ್ ಚೊಕ್ಕಬೆಟ್ಟು, ಶರೀಫ್ ಕೊಡ್ನೀರ್, ಶರೀಫ್ ಕಾವು, ಅಬ್ಬಾಸ್ ಕೇಕುಡೆ, ಅಬ್ದುಲ್ ಖಾದರ್ ಕಾರ್ಕಳ, ಬಶೀರ್ ಕೆಮ್ಮಿಂಜೆ, ಅಬ್ದುಲ್ ರಝಾಕ್ ಸೋಂಪಾಡಿ, ಉಸ್ಮಾನ್ ಮರೀಲ್, ಅಬೂಬಕ್ಕರ್ ಸಿದ್ದೀಕ್ ಮೂಡುಬಿದಿರೆ, ಸಮೀರ್ ಇಬ್ರಾಹಿಂ ಕಲ್ಲರೆ , ನವಾಝ್ ಮನಲ್,  ಇಫ್ತಿಕಾರ್ ಅಡ್ಯಾರ್ ಕಣ್ಣೂರ್, ಅಬ್ದುಲ್ ಲತೀಫ್ ಕೌಡಿಚ್ಚಾರ್, ಸಂಶುದ್ದೀನ್ ಹಮೀದ್ ಮೂಡುಬಿದಿರೆ.

ಕಾರ್ಯಕಾರಿ ಸಮಿತಿ ಸದಸ್ಯರು – ಜಲೀಲ್ ಗುರುಪುರ, ಅಶ್ರಫ್ ಪಾವೂರ್, ಅಶ್ರಫ್ ಕೆಮ್ಮೀಂಜೆ, ಅಬ್ದುಲ್ ರಹ್ಮಾನ್ ಸಜಿಪ, ಇಸ್ಮಾಯಿಲ್ ಮುಂಧೀರ್ ತೋಡಾರ್ , ಮುನೀರ್ ಕಾಞ್ಜಂಗಾಡ್ , ಝುಬೈರ್ ತೋಡಾರ್ , ಅಶ್ರಫ್ ಅರ್ತಿಕೆರೆ, ಜಬ್ಬಾರ್ ಕಲ್ಲಡ್ಕ, ಯೂನುಸ್ ತಲಪಾಡಿ , ತಾಹೀರ್ ಹೆಂತಾರ್, ಜಾಬಿರ್ ಬಪ್ಪಳಿಗೆ ಆಯ್ಕೆಯಾದರು.

ಮಹಮ್ಮದ್  ಶಬ್ಬೀರ್ ಸಕಲೇಶಪುರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News