​ಮಾಹೆಯ ಗಾಂಧಿಯನ್ ಸೆಂಟರ್‌ನಿಂದ ಹೊಸ ಕೋರ್ಸ್

Update: 2021-06-22 17:50 GMT

ಮಣಿಪಾಲ, ಜೂ.22: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ (ಮಾಹೆ) ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆಟ್ಸರ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಹಲವು ಹೊಸ ವೈಶಿಷ್ಟ್ಯಗಳೊಂದಿಗೆ ಈ ಶೈಕ್ಷಣಿಕ ವರ್ಷದಿಂದ ‘ಬಿಎ ಇನ್ ಎಸ್ಥೆಟಿಕ್ಸ್ ಆಂಡ್ ಪೀಸ್ ಸ್ಟಡೀಸ್’ ಎಂಬ ಹೊಸ ಕೋರ್ಸ್‌ನ್ನು ಪ್ರಾರಂಭಿಸಿದೆ. ಈ ನೂತನ ಕಾರ್ಯಕ್ರಮವು ಆನರ್ಸ್ ಪದವಿಯ ಸಾಧ್ಯತೆಯೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿ -2020ಗೆ ಅನುಗುಣವಾಗಿದೆ.

ಈಗ ಹೆಚ್ಚು ಚರ್ಚೆಗೊಳ್ಳುತ್ತಿರುವ ಅಂತರಶಿಸ್ತೀಯ ಶಿಕ್ಷಣದೊಂದಿಗೆ ‘ಬಿಎ ಇನ್ ಎಸ್ಥೆಟಿಕ್ಸ್ ಆಂಡ್ ಪೀಸ್ ಸ್ಟಡೀಸ್’ ತನ್ನ ವಿಶಾಲ ಚೌಕಟ್ಟಿನಲ್ಲಿ ಕಲೆ ಮತ್ತು ಸಮಾಜ ಶಾಸ್ತ್ರದ ಅಧ್ಯಯನವನ್ನು ಒಟ್ಟಿಗೆ ತರಲು ಉದ್ದೇಶಿಸಿದೆ. ಸಾಹಿತ್ಯ, ಕಲೆ ಮತ್ತು ಮಾಧ್ಯಮಗಳ ಕಲಿಕೆಯುಇಲ್ಲಿ ರಾಜಕೀಯ ಶಾಸ್ತ್ರ, ಅಂತಾರಾಷ್ಟ್ರೀಯ ಸಂಬಂಧಗಳು, ತತ್ವಶಾಸ್ತ್ರಗಳ ಅಧ್ಯಯನದ ಜೊತೆಗೆ ಸಾಧ್ಯವಾಗಲಿದೆ ಗಾಂಧಿಯನ್ ಸೆಂಟರ್ ಪ್ರಕಟಣೆಯಲ್ಲಿ ತಿಳಿಸಿದೆ.

ಸೃಜನಶೀಲ/ಕಲಾ ಸಾಮರ್ಥ್ಯ ಮತ್ತು ಬೌದ್ಧಿಕ ಕುಶಾಗ್ರಮತಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಅರ್ಥಪೂರ್ಣ ವೃತ್ತಿ ಸಾಧ್ಯತೆಗಳನ್ನು ಒದಗಿಸುವುದು ಇದರ ಉದ್ದೇಶ. ಪತ್ರಿಕೋದ್ಯೋಗ, ಮಾಧ್ಯಮ, ಸಂವಹನ, ಸಾಮಾಜಿಕ ವಲಯ, ಅಂತಾರಾಷ್ಟ್ರೀಯ ಸಂಸ್ಥೆಗಳು, ಸಂಶೋಧನೆ ಮತ್ತು ಪ್ರಕಾಶನ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುವಂತೆ ವಿದ್ಯಾರ್ಥಿಗಳು ಕಲಾತ್ಮಕ, ಬೌದ್ಧಿಕ ಮತ್ತು ಸಂವಹನ ಸಾಮರ್ಥ್ಯಗಳನ್ನು ಬೆಳೆಯಿಸಿಕೊಳ್ಳುವಂತೆ ಪಠ್ಯಕ್ರಮವನ್ನು ಸಿದ್ಧ ಗೊಳಿಸಲಾಗುವುದು ಎಂದು ಜಿಸಿಪಿಎಎಸ್ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿ.ಎ.(ಎಸ್ಥೆಟಿಕ್ಸ್ ಆಂಡ್ ಪೀಸ್ ಸ್ಟಡೀಸ್) ಕಾರ್ಯಕ್ರಮದಲ್ಲಿ ನಿರ್ಗಮನ ವರ್ಷಗಳ ಆಯ್ಕೆ ಇದ್ದು, ವಿದ್ಯಾರ್ಥಿಗಳು ಮೂರು ವರ್ಷಗಳ ಕಾಲ ಅಧ್ಯಯನ ಮಾಡಿ ಸಾಮಾನ್ಯ ಪದವಿ ಪಡೆಯುವ, ನಾಲ್ಕು ವರ್ಷಗಳ ಕಾಲ ಅಧ್ಯಯನ ಮಾಡಿ ಆನರ್ಸ್ ಪದವಿ ಪಡೆಯುವ, ಎರಡು ವರ್ಷಗಳ ಕಾಲ ಅಧ್ಯಯನ ಮಾಡಿ ಡಿಪ್ಲೊಮಾ, ಒಂದು ವರ್ಷ ಅಧ್ಯಯನ ಮಾಡಿ ಪ್ರಮಾಣ ಪತ್ರ ಪಡೆಯುವ ಅವಕಾಶಗಳಿವೆ. ಆನರ್ಸ್ ಪದವಿಯಲ್ಲಿ ಸಂಶೋಧನೆಯು ಅವಿಭಾಜ್ಯಅಂಗವಾಗಿರುವುದರಿಂದ ಇದು ವಿಭಿನ್ನ ಮತ್ತು ಜಾಗತಿಕ ಮಾನದಂಡ ಗಳಿಗೆ ಸಮನಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮದ ವಿವರಗಳನ್ನು ಹಾಗೂ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನ ಲಿಂಕ್‌ನಿಂದ ಪಡೆಯಬಹುದು. - https://manipal.edu/gandhian-centre.html -ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News