ಅಮೆಮ್ಮಾರ್ ನಲ್ಲಿ ಸಮಸ್ತ ಸ್ಥಾಪನಾ ದಿನಾಚರಣೆ, ಶ್ರಮದಾನ
Update: 2021-06-26 12:59 GMT
ಫರಂಗಿಪೇಟೆ, ಜೂ. 26: ಸಮಸ್ತ ಸ್ಥಾಪನಾ ದಿನಾಚರಣೆ ಪ್ರಯುಕ್ತ ಎಸ್ಕೆ ಎಸ್ಎಸ್ ಎಫ್ ಅಮೆಮ್ಮಾರ್ ಯುನಿಟ್ ವತಿಯಿಂದ ಅಮೆಮ್ಮಾರ್ ಬದ್ರಿಯಾ ಮಸೀದಿ ವಠಾರದಲ್ಲಿ ದ್ವಜಾರೋಹಣ ಕಾರ್ಯಕ್ರಮ ಮತ್ತು ಮಸೀದಿಯ ದಫನ ಭೂಮಿಯಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸುವ ಮೂಲಕ ಶ್ರಮದಾನ ನಡೆಸಲಾಯಿತು.
ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮರಬ್ಬ ಎಎಸ್ಬಿ ದ್ವಜಾರೋಹಣಗೈದರು. ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಎಸ್ಕೆ ಎಸ್ಎಸ್ ಎಫ್ ಅಮೆಮ್ಮಾರ್ ಯುನಿಟ್ ಕಾರ್ಯದರ್ಶಿ ನಿಯಾಝ್ ಫೈಝಿ, ಮಸೀದಿ ಕೋಶಾಧಿಕಾರಿ ಅಬ್ದುಲ್ ರಝಾಕ್, ಎಸ್ಕೆ ಎಸ್ಎಸ್ ಎಫ್ ಫರಂಗಿಪೇಟೆ ಕ್ಲಸ್ಟರ್ ಅಧ್ಯಕ್ಷರಾದ ಇಸ್ಮಾಯಿಲ್ ಅಝ್ಹರಿ, ವಿಖಾಯ ಕಾರ್ಯಕರ್ತರಾದ ಹಮೀದ್ ಸಿದ್ದೀಕ್ ನಾಝಿಮ್ ಶೆರೀಫ್ ಬಶೀರ್ ಜವಾದ್ ಮತ್ತಿತರರು ಉಪಸ್ಥಿತರಿದ್ದರು ಎಸ್ಕೆ ಎಸ್ಎಸ್ ಎಫ್ ಕ್ಯಾಂಪಸ್ ವಿಂಗ್ ಅಮೆಮ್ಮಾರ್ ಯುನಿಟ್ ಕಾರ್ಯದರ್ಶಿ ತಮೀಮ್ ವಂದಿಸಿದರು.