ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಊಟ ವಿತರಣೆ

Update: 2021-06-26 17:08 GMT

ಮಂಗಳೂರು, ಜೂ. 26: ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್  ನೇತೃತ್ವದಲ್ಲಿ ಕಳೆದ 59 ದಿನಗಳಿಂದ ನಡೆಯುತ್ತಿರುವ ಊಟ ವಿತರಣೆಯು ಶನಿವಾರ  ನಿರ್ಗತಿಕರಿಗೆ, ಭಿಕ್ಷುಕರಿಗೆ ಹಾಗೂ ಆಸ್ಪತ್ರೆಯಲ್ಲಿರುವ ಕೋವಿಡ್ ರೋಗಿಗಳ ಸಂಬಂಧಿಕರಿಗೆ ಸೇರಿದಂತೆ ಸುಮಾರು 500 ಕ್ಕೂ ಅಧಿಕ ಜನರಿಗೆ ಮಂಗಳೂರು ನಗರದಾದ್ಯಂತ ಊಟದ ಪೊಟ್ಟಣ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್, ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಟಿ.ಕೆ ಸುಧೀರ್, ಜಿಲ್ಲಾ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್, ರಮಾನಂದ ಪೂಜಾರಿ, ಆರೀಫ್ ಬಂದರ್, ಸೌಹಾನ್, ಸಂಜನಾ ಚಲವಾದಿ, ಮೀನಾ ಟೆಲ್ಲೀಸ್, ಸಲೀಂ ಜೆಪ್ಪು, ಫಯಾಝ್ ಅಮ್ಮೆಮ್ಮಾರ್, ಅಲ್ಫಝ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News