ಉ.ಪ್ರ.: ಅಂಬೇಡ್ಕರ್ ಸ್ಮಾರಕಕ್ಕೆ ಶಿಲಾನ್ಯಾಸ ನೆರವೇರಿಸಿದ ರಾಷ್ಟ್ರಪತಿ

Update: 2021-06-29 17:05 GMT

ಲಕ್ನೋ, ಜೂ. 29: ಉತ್ತರಪ್ರದೇಶ ಸರಕಾರ ಲಕ್ನೋದಲ್ಲಿ ನಿರ್ಮಿಸಲಿರುವ ಸಂವಿಧಾನ ಶಿಲ್ಪಿ ಡಾ. ಬಾಹಾ ಸಾಹೇಬ್ ಅಂಬೇಡ್ಕರ್ ಅವರ ಸ್ಮಾರಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.

ಈ ಶಿಲಾನ್ಯಾಸ ಕಾರ್ಯಕ್ರಮ ಆನ್ಲೈನ್ ನಲ್ಲಿ ನಡೆಯಿತು. ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.

ಉತ್ತರಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆಗೆ ಕೆಲವು ತಿಂಗಳುಗಳು ಇರುವಾಗ ಉತ್ತರಪ್ರದೇಶ ಸರಕಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮಾರಕ ನಿರ್ಮಿಸಲು ಶಿಲಾನ್ಯಾಸ ನೆರವೇರಿಸಿರುವುದು ವದಂತಿಗೆ ಕಾರಣವಾಗಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ತವರು ರಾಜ್ಯ ಉತ್ತರಪ್ರದೇಶ. ಅವರು ಭಾರತದ ಎರಡನೇ ದಲಿತ ರಾಷ್ಟ್ರಪತಿ. ಅವರ ಮೂರು ದಿನಗಳ ಉತ್ತರಪ್ರದೇಶ ಭೇಟಿಯಲ್ಲಿ ಇದು ಕೊನೆಯ ದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News