ಬಂಟ್ವಾಳ ಗ್ರಾಮಾಂತರ, ವಿಟ್ಲ, ಬೆಳ್ತಂಗಡಿ ಠಾಣೆಯ ಇನ್ ಸ್ಪೆಕ್ಟರ್ ಗಳಿಂದ ಅಧಿಕಾರ ಸ್ವೀಕಾರ

Update: 2021-07-03 06:46 GMT

ಬಂಟ್ವಾಳ, ಜು.3: ಬಂಟ್ವಾಳ ಗ್ರಾಮಾಂತರ ಮತ್ತು ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಗಳಾಗಿ ಹಾಗೂ ಬೆಳ್ತಂಗಡಿ ವೃತ್ತದ ಇನ್ ಸ್ಪೆಕ್ಟರ್ ಆಗಿ ಮೂವರು ಪೊಲೀಸ್ ಅಧಿಕಾರಿಗಳು ಅಧಿಕಾರ ಸ್ವೀಕರಿಸಿದರು. 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಆಗಿ ಟಿ.ಡಿ.ನಾಗರಾಜ್ ಅವರು, ವಿಟ್ಲ ಠಾಣೆಯ ಇನ್ ಸ್ಪೆಕ್ಟರ್ ಆಗಿ ನಾಗರಾಜ್ ಎಚ್.ಇ. ಅವರು, ಬೆಳ್ತಂಗಡಿ ವೃತ್ತದ ಇನ್ ಸ್ಪೆಕ್ಟರ್ ಆಗಿ ಶಿವಕುಮಾರ್ ಬಿ. ಅವರು ಅಧಿಕಾರ ಸ್ವೀಕರಿಸಿದರು. 

ಬಂಟ್ವಾಳ ವೃತ್ತ ವ್ಯಾಪ್ತಿಯಲ್ಲಿ ಇದ್ದ ಬಂಟ್ವಾಳ ಗ್ರಾಮಾಂತರ, ಬಂಟ್ವಾಳ ನಗರ ಮತ್ತು ವಿಟ್ಲ ಪೊಲೀಸ್ ಠಾಣೆಯನ್ನು ಬೇರ್ಪಡಿಸಿ ಮೂರೂ ಠಾಣೆಯನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಹಾಗಾಗಿ ಮೂರು ಠಾಣೆಗೆ ಮೂವರು ಇನ್ ಸ್ಪೆಕ್ಟರ್ ಗಳನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಬಂಟ್ವಾಳ ನಗರ ಠಾಣೆಗೆ ಈ ಹಿಂದೆಯೇ ಚೆಲುವರಾಜ್ ಅವರು ಇನ್ ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News