ಬೆಲೆ ಏರಿಕೆ ವಿರೋಧಿಸಿ ಬೈಂದೂರಿನಲ್ಲಿ ಸಿಐಟಿಯು ಪ್ರತಿಭಟನೆ

Update: 2021-07-08 15:42 GMT

ಬೈಂದೂರು, ಜು.8: ವಿದ್ಯುತ್, ಅಡುಗೆ ಅನಿಲ, ತೈಲಬೆಲೆ, ದಿನ ಬಳಕೆ ಆಹಾರ ವಸ್ತುಗಳ ಬೆಲೆ ವಿಪರೀತ ಏರಿಕೆ ವಿರೋಧಿಸಿ ಸಿಐಟಿಯು ಬೈಂದೂರು ತಾಲೂಕು ಸಮಿತಿಯ ನೇತೃತ್ವದಲ್ಲಿ ಇಂದು ಬೈಂದೂರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ವಿವಿಧ ಬೇಡಿಕೆಗಳ ಮನವಿಯನ್ನು ಬೈಂದೂರು ತಹಶೀಲ್ದಾರ್ ಶೋಭ ಲಕ್ಷ್ಮಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಸಿಐಟಿಯು ಮುಖಂಡರಾದ ಗಣೇಶ ತೊಂಡೆಮಕ್ಕಿ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಶೀಲಾವತಿ, ರಾಜೀವ ಪಡುಕೋಣೆ, ವೆಂಕಟೇಶ ಕೋಣಿ, ನಾಗರತ್ನ ನಾಡ, ಮಂಜು ಪಡುವರಿ, ಗಣೇಶ ಮೊಗವೀರ ಬೈಂದೂರು, ಮಾಧವ ಪೂಜಾರಿ ಉಪ್ಪುಂದ, ಲಕ್ಷ್ಮಣ ಯಡ್ತರೆ,ಹರೀಶ್ ಬೈಂದೂರು, ರಾಮ ಬಡಾಕೆರೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News