ಸಹಕಾರಿ ಸಂಘದ ಸಿಬ್ಬಂದಿ ಆತ್ಮಹತ್ಯೆ

Update: 2021-07-10 16:34 GMT

ಶಂಕರನಾರಾಯಣ, ಜು.10: ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿನ ಅವ್ಯವಹಾರಕ್ಕೆ ಸಂಬಂಧಪಟ್ಟ ಇಲಾಖೆ ತನಿಖೆಗೆ ಹೆದರಿ ಸಂಘದ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.9ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಸಿದ್ದಾಪುರ ಕೆಳಪೇಟೆ ನಿವಾಸಿ ಸಂಪತ್ ಕಾಮತ್(45) ಎಂದು ಗುರುತಿಸಲಾಗಿದೆ. ಸಂಘದಲ್ಲಿನ ಅವ್ಯವಹಾರಕ್ಕೆ ಸಂಬಂಧಪಟ್ಟ ಇಲಾಖೆ ತನಿಖೆ ಹಾಗೂ ವಿಪರೀತ ಸಾಲ ಕಾರಣದಿಂದ ಮನನೊಂದ ಸಂಪತ್, ಮನೆಯಲ್ಲಿ ವಿಷ ಸೇವಿಸಿ ಬಳಿಕ ಮನೆಯ ಹತ್ತಿರದ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News