​ಹೊಳೆಗೆ ಬಿದ್ದು ಮಹಿಳೆ ಮೃತ್ಯು

Update: 2021-07-15 16:30 GMT

ಗಂಗೊಳ್ಳಿ, ಜು.15: ಮಹಿಳೆಯೊಬ್ಬರು ಹೊಳೆಯ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದಾಗ ಅಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.

ನೂಜಾಡಿ ಗ್ರಾಮದ ಬಗ್ವಾಡಿ ಮಕ್ಕಳಕಟ್ಟೆಯ ಸದಾನಂದ ಎಂಬವರ ಪತ್ನಿ ಮಹಾಲಕ್ಷ್ಮೀ (30) ಜು.13ರಂದು ಸಂಜೆ 5 ಗಂಟೆ ಸುಮಾರಿಗೆ ಮನೆ ಯಿಂದ ಹೊರಹೋಗಿದ್ದು ಬಳಿಕ ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ 8 ಗಂಟೆಗೆ ಅವರ ಮೃತದೇಹ ಗಂಗೊಳ್ಳಿ ಬಂದರಿನ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದ್ದು, ಬಗ್ವಾಡಿ ಸೌಪರ್ಣಿಕ ಹೊಳೆ ಬದಿಯಲ್ಲಿ ನಡೆದು ಹೋಗುತಿದ್ದಾಗ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿ ನಲ್ಲಿ ಮುಳುಗಿ ಮೃತ ಪಟ್ಟಿರಬೇಕೆಂದು ಶಂಕಿಸಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News