ಆಮೆಮ್ಮಾರ್ ಎಸ್ಕೆಎಸ್ಸೆಸೆಫ್ ವತಿಯಿಂದ ರಕ್ತದಾನ ಶಿಬಿರ

Update: 2021-07-19 17:39 GMT

ಫರಂಗಿಪೇಟೆ, ಜು. 19: ಎಸ್ಕೆಎಸ್ಎಸ್ಎಫ್  ಆಮೆಮ್ಮಾರ್ ಯುನಿಟ್, ವಿಖಾಯ ರಕ್ತದಾನ ಬಳಗ ಮಂಗಳೂರು ವಲಯ ದಕ ಜಿಲ್ಲೆ ಹಾಗೂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಅಮೆಮ್ಮಾರ್ ಇದರ ಜಂಟಿ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಬಾಗಿತ್ವದಲ್ಲಿ ಆಮೆಮ್ಮಾರ್ ಮದರಸ ಹಾಲ್ ನಲ್ಲಿ ರಕ್ತದಾನ ಶಿಬಿರ ಇತ್ತೀಚೆಗೆ ನಡೆಯಿತು 

ಅಮೆಮ್ಮಾರ್ ಮಸೀದಿ ಖತೀಬ್ ಅಬ್ದುಲ್ ಲೇತಿಫ್ ಹನೀಫಿ ಶಿಬಿರವನ್ನು ಉದ್ಘಾಟನೆಗೈದರು. ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮರಬ್ಬ ಎಎಸ್ಬಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅರಫಾ ಜುಮ್ಮಾ ಮಸೀದಿ ಕುಂಪನಮಜಲ್ ಖತೀಬ್ ಮುಖ್ಯ ಬಾಷಣ ಮಾಡಿದರು. ಎಸ್ಕೆಎಸ್ಎಫ್ ಆಮೆಮ್ಮಾರ್ ಯೂನಿಟ್ ಕಾರ್ಯದರ್ಶಿ ನಿಯಾಝ್ ಫೈಝಿ ಪ್ರಾಸ್ತಾವಿಕ ಮಾತನಾಡಿದರು.
 
ಮುಖ್ಯ ಅತಿಥಿಗಳಾಗಿ ಪುದು ಗ್ರಾಮಪಂ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ, ಅಮೆಮ್ಮಾರ್ ಮಸೀದಿ ಉಪಾಧ್ಯಕ್ಷ ಎಫ್ಎ ಕಾದರ್, ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್,  ಸದಸ್ಯರಾದ ಸಿದ್ದೀಕ್ ಕೆ, ಇಕ್ಬಾಲ್, ಹನೀಫ್, ಎಸ್ಕೆಎಸ್ಎಸ್ಎಫ್ ಆಮೆಮ್ಮಾರ್ ಯುನಿಟ್ ಅಧ್ಯಕ್ಷ ಸೆಲೀಮ್ ಲೀಡರ್ ಎಸ್ಕೆಎಸ್ಎಸ್ ಎಫ್ ರಕ್ತದಾನಿ ಬಳಗ ದಕ ಜಿಲ್ಲೆ ಉಸ್ತುವಾರಿ ನಝೀರ್ ವಳಚ್ಚಿಲ್ ಎಸ್ಕೆಎಸ್ಎಸ್ಎಫ್ ಫರಂಗಿಪೇಟೆ ಕ್ಲಸ್ಟರ್ ಅಧ್ಯಕ್ಷ ಇಸ್ಮಾಯಿಲ್ ಅಝ್ಹರಿ ಕೋಶಾಧಿಕಾರಿ ಬದ್ರುದ್ದೀನ್ ಆಮೆಮ್ಮಾರ್, ಕ್ಯಾಂಪಸ್ ವಿಂಗ್ ಆಮೆಮ್ಮಾರ್ ಅಧ್ಯಕ್ಷ ತಮೀಮ್ ಮತ್ತಿತರರು ಉಪಸ್ಥಿತರಿದ್ದರು ಆಮೆಮ್ಮಾರ್ ಮಸೀದಿ ಲೆಕ್ಕಪರಿಶೋಧಕ ಬಶೀರ್ ತಂಡೇಲ್ ಸ್ವಾಗತಿಸಿದರು. ಎಸ್ಕೆಎಸ್ಎಫ್ ಮಂಗಳೂರು ಝೋನ್ ಕಾರ್ಯದರ್ಶಿ ಇರ್ಫಾನ್ ಕಣ್ಣೂರು ದನ್ಯವಾದಗೈದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News