ಮುಂಡಗೋಡ: ಬಲೆಗೆ ಸಿಲುಕಿಕೊಂಡಿದ್ದ ಜಿಂಕೆಯನ್ನು ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

Update: 2021-07-20 12:55 GMT

ಮುಂಡಗೋಡ: ಬೆಳೆಯ ರಕ್ಷಣೆಗೆ ಹಾಕಲಾಗಿದ್ದ ಬಲೆಗೆ ಸಿಲುಕಿಕೊಂಡಿದ್ದ ಜಿಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಿಡಿಸಿ ಕಾಡಿಗೆ ಬಿಟ್ಟ ಘಟನೆ  ನಡೆದಿದೆ.

ತಾಲೂಕಿನ ಅಜ್ಜಳ್ಳಿ ಗ್ರಾಮದಲ್ಲಿ ವಿಷ್ಣು ಆಲದಕಟ್ಟಿಯವರ ಹೊಲಕ್ಕೆ ಹಾಕಲಾಗಿದ್ದ ಬಲೆಗೆ ಜಿಂಕೆ ಸಿಲುಕಿಕೊಂಡು ಬಲೆಯಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಿದ್ದನ್ನು ನೋಡಿ ಹೊಲದ ಮಾಲಿಕ  ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಶ್ರೀಧರ ಭಜಂತ್ರಿ ಹಾಗೂ ಶಿವಪ್ಪ ಶಿರ್ಮಾ  ಜಿಂಕೆಯನ್ನು ಬಲೆಯಿಂದ ಬಿಡಿಸಿ ಕಾಡಿಗೆ ಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News