ದ.ಕ.ಜಿಲ್ಲಾ ಕಾಂಗ್ರೆಸ್: 16 ಬ್ಲಾಕ್‌ಗಳಿಗೆ ಸಂಯೋಜಕರ ನೇಮಕ

Update: 2021-07-27 10:29 GMT

ಮಂಗಳೂರು, ಜು.27: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ 16 ಬ್ಲಾಕ್‌ಗಳಲ್ಲಿ ಪಕ್ಷ ಸಂಘಟನೆಯ ಬಗ್ಗೆ ವಿವಿಧ ಜವಾಬ್ದಾರಿಗಳನ್ನು ನೋಡಿಕೊಳ್ಳಲು ಜಿಲ್ಲಾ ಸಂಯೋಜಕರು, ಸಹ ಸಂಯೋಜಕರು, ಬ್ಲಾಕ್ ಸಂಯೋಜಕರನ್ನು ನೇಮಿಸಿದೆ.

ಜಿಲ್ಲಾ ಸಂಯೋಜಕರಾಗಿ ಸದಾಶಿವ ಉಳ್ಳಾಲ್, ಶುಭೋದಯ ಆಳ್ವ, ಸಹ ಸಂಯೋಜಕರಾಗಿ ವಿಶ್ವಾಸ್ ಕುಮಾರ್ ದಾಸ್, ಶೋಭಾ ಕೇಶವ, ಶಾಲೆಟ್ ಪಿಂಟೋ, ಸವಾದ್ ಸುಳ್ಯ ಅವರನ್ನು ನೇಮಿಸಲಾಗಿದೆ.

ಬೆಳ್ತಂಗಡಿ ನಗರ ಬ್ಲಾಕ್‌ಗೆ ಮುಹಮ್ಮದ್ ಅಲಿ, ಬೆಳ್ತಂಗಡಿ ಗ್ರಾಮೀಣ ಬ್ಲಾಕ್‌ಗೆ ರಮಾನಂದ ಪೂಜಾರಿ, ಸುಳ್ಯ ಬ್ಲಾಕ್‌ಗೆ ಶಾಹುಲ್ ಹಮೀದ್ ಕೆ.ಕೆ., ಕಡಬ ಬ್ಲಾಕ್‌ಗೆ ಜಯಪ್ರಕಾಶ್ ರೈ, ಬಂಟ್ವಾಳ ಬ್ಲಾಕ್‌ಗೆ ಶಬ್ಬೀರ್ ಎಸ್., ಪಾಣೆಮಂಗಳೂರು ಬ್ಲಾಕ್‌ಗೆ ಅನಿತಾ ಹೇಮನಾಥ್ ಶೆಟ್ಟಿ, ಮೂಡುಬಿದಿರೆ ಬ್ಲಾಕ್‌ಗೆ ಅಭಿಷೇಕ್ ಉಳ್ಳಾಲ್, ಮುಲ್ಕಿ ಬ್ಲಾಕ್‌ಗೆ ಸರ್ಫ್ರಾಝ್ ಉಳ್ಳಾಲ್, ಪುತ್ತೂರು ಬ್ಲಾಕ್‌ಗೆ ಎನ್.ಪಿ.ಮನುರಾಜ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ಗೆ ಮುಹಮ್ಮದ್ ಕುಂಜತ್ತಬೈಲ್, ಉಳ್ಳಾಲ ಬ್ಲಾಕ್‌ಗೆ ಟಿ.ಕೆ.ಸುಧೀರ್, ಮುಡಿಪು ಬ್ಲಾಕ್‌ಗೆ ಪಿ.ಪಿ.ವರ್ಗೀಸ್, ಮಂಗಳೂರು ದಕ್ಷಿಣ ಬ್ಲಾಕ್‌ಗೆ ಲಾರೆನ್ಸ್ ಡಿಸೋಜ, ಮಂಗಳೂರು ನಗರ ಬ್ಲಾಕ್‌ಗೆ ಮಮತಾ ಗಟ್ಟಿ, ಸುರತ್ಕಲ್ ಬ್ಲಾಕ್‌ಗೆ ಪ್ರಸಾದ್ ರಾಜ್ ಕಾಂಚನ್, ಗುರುಪುರ ಬ್ಲಾಕ್‌ಗೆ ಅನಿಲ್ ಕುಮಾರ್ ಅವರನ್ನು ನೇಮಿಸಲಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News