ಮೊಟ್ಟೆ ಅವ್ಯವಹಾರ ಆರೋಪ: ಶಶಿಕಲಾ ಜೊಲ್ಲೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2021-07-27 12:36 GMT

ಮಂಗಳೂರು, ಜು.27: ಮಾತೃಪೂರ್ಣ ಯೋಜನೆಯಡಿ ಮೊಟ್ಟೆ ಖರೀದಿಗೆ ಸಂಬಂಧಿಸಿದಂತೆ ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಮಂಗಳವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬಿಜೆಪಿ ಸರಕಾರವು ಭ್ರಷ್ಟಾಚಾರದ ಕೂಪವಾಗಿದೆ. ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗರ್ಭಿಣಿಯರಿಗೆ ನೀಡಲಾಗುವ ಮೊಟ್ಟೆ ಖರೀದಿಯಲ್ಲೂ ಕಮಿಷನ್ ಹೊಡೆಯುವ ನೀಚ ಕೆಲಸಕ್ಕೆ ಕೈಹಾಕಿದೆ. ಶಶಿಕಲಾ ಜೊಲ್ಲೆಯಂತಹ ಭ್ರಷ್ಟಾಚಾರಿಗಳನ್ನು ಮತ್ತೆ ಬಿಜೆಪಿ ಸಂಪುಟಕ್ಕೆ ಸೇರಿಸಬಾರದು. ಟೆಂಡರ್ ಪ್ರಕ್ರಿಯೆಯನ್ನು ತಕ್ಷಣ ರದ್ದು ಮಾಡಿ ಅಕ್ರಮವೆಸಗಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾಜಿ ಶಾಸಕರಾದ ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ಪಕ್ಷದ ಮುಖಂಡರಾದ ಶಾಹುಲ್ ಹಮೀದ್ ಕೆ.ಕೆ., ಶಾಲೆಟ್ ಪಿಂಟೊ, ಸದಾಶಿವ ಉಳ್ಳಾಲ್, ಪಿ.ಪಿ.ವರ್ಗೀಸ್, ಪದ್ಮನಾಭ ಅಮೀನ್, ಅಬ್ಬಾಸ್ ಅಲಿ, ಶುಭೋದಯ ಆಳ್ವ, ಬಿ.ಕೆ.ಇದ್ದಿನಬ್ಬ, ಶಬ್ಬೀರ್ ಎಸ್, ನೀರಜ್ ಪಾಲ್, ಟಿ.ಕೆ.ಸುಧೀರ್, ರಮಾನಂದ ಪೂಜಾರಿ, ಆರೀಫ್ ಬಂದರ್, ಪ್ರತಿಭಾ ಕುಳಾಯಿ, ಸರ್ವೋತ್ತಮ ಗೌಡ, ಲಾರೆನ್ಸ್ ಡಿಸೋಜ, ಅಬ್ದುಲ್ ಸತ್ತಾರ್ ಅಡ್ಯಾರ್, ಅಭಿಷೇಕ್ ಉಳ್ಳಾಲ್, ಸುಧೀರ್ ಕಡೇಕಾರ್, ಮುಹಮ್ಮದ್ ಅಲಿ, ಮುಹಮ್ಮದ್ ಶಮೀರ್ ಕಾಟಿಪಳ್ಳ, ಶೌಹಾದ್ ಗೂನಡ್ಕ, ಸ್ಟ್ಯಾನಿ ಆಳ್ವರಿಸ್, ಕಿರಣ್ ಜೇಮ್ಸ್, ಸರ್ಫ್ರಾಝ್ ಬಾಳ, ಹಸನ್ ಫಳ್ನೀರ್, ರಾಘವೇಂದ್ರ ರಾವ್, ಮುಹಮ್ಮದ್ ಬಪ್ಪಳಿಗೆ, ಅಪ್ಪಿ, ಮರಿಯಮ್ಮ ಥಾಮಸ್, ಮಮತಾಗಟ್ಟಿ, ಪ್ರತಿಭಾ ಕುಳಾಯಿ, ಶೋಭಾ ಪಡೀಲ್, ಶಾಂತಳಾ ಗಟ್ಟಿ, ಮಲ್ಲಿಕಾ ಪಕ್ಕಳ, ಟಿ.ಕೆ. ಶೈಲಜಾ, ಸಂಜನಾ ಛಲವಾದಿ, ಗೀತಾ, ತನ್ವೀರ್ ಷಾ, ಚಂದ್ರಕಲಾ, ಚಂದ್ರಿಕಾ, ಮಂಜುಳಾ, ವಿದ್ಯಾ, ಶೆಲಿನ್, ಜಾಸಿಂ ಡಿಸೋಜ, ಮೀನಾ ಟೆಲ್ಲಿಸ್, ಜಯಂತಿ, ಮಲ್ಲಿಕಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News