ಮಂಗಳೂರಿನ ಎರಡು ಕಡೆ ಕಳವು: ದೂರು

Update: 2021-07-27 15:34 GMT

ಮಂಗಳೂರು,ಜು.27: ಜಪ್ಪಿನಮೊಗರು ದ್ವಾರದ ಸಮೀಪ ಸಂತೋಷ್ ಕುಮಾರ್ ಟಿ. ಎಂಬವರಿಗೆ ಸೇರಿದ ಬೇಕರಿಯಲ್ಲಿ ಕಳವು ನಡೆದಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತೋಷ್ ಎಂಬವರು ಜು.25ರಂದು ರಾತ್ರಿ 10:30ರ ಸುಮಾರಿಗೆ ಬೇಕರಿ ಬಂದ್ ಮಾಡಿದ್ದಾರೆ. ಮರುದಿನ ಬೆಳಗ್ಗೆ 7 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಅಂಗಡಿಯ ಬೀಗ ಮುರಿದು ಒಳ ಪ್ರವೇಶಿಸಿ ಕ್ಯಾಶ್ ಡ್ರಾವರ್‌ನಲ್ಲಿದ್ದ 41,000 ರೂ. ನಗದು ಹಾಗೂ ಅಂಗಡಿಗೆ ಅಳವಡಿಸಿದ ಸಿಸಿ ಕ್ಯಾಮೆರಾದ ಡಿವಿಆರ್‌ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿ ಕಳವು: ಜು.23ರಂದು ಮಧ್ಯರಾತ್ರಿ 1:40ರ ಸುಮಾರಿಗೆ ಯಾರೋ ಕಳ್ಳರು ಕಪಿತಾನಿಯದ ಸುರೇದ್ರ ಎಂಬವರ ಮನೆಯ ಕಿಟಕಿ ರಾಡ್ ಮುರಿದು ಮನೆಯೊಳಗೆ ಪ್ರವೇಶಿಸಿ ಕಪಾಟಿನಲ್ಲಿದ್ದ 3,000 ರೂ.ನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆಯೂ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News