×
Ad

ಭಾರತ ಕ್ರಿಕೆಟಿಗರಾದ ಚಾಹಲ್, ಕೃಷ್ಣಪ್ಪ ಗೌತಮ್ ಗೆ ಕೊರೋನ

Update: 2021-07-30 13:13 IST
ಚಾಹಲ್

ಹೊಸದಿಲ್ಲಿ:  ಭಾರತೀಯ ಕ್ರಿಕೆಟಿಗರಾದ ಯುಜ್ವೇಂದ್ರ ಚಾಹಲ್ ಹಾಗೂ  ಕೃಷ್ಣಪ್ಪ ಗೌತಮ್ ಶ್ರೀಲಂಕಾದಲ್ಲಿ ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ಆತಿಥೇಯ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ ಗಳ ಸರಣಿಯಲ್ಲಿ ಭಾಗವಹಿಸಲು ಈ ಜೋಡಿ ಭಾರತೀಯ ತಂಡದೊಂದಿಗೆ ಇತ್ತು. ಆದರೆ ಕೃನಾಲ್ ಪಾಂಡ್ಯ ಅವರ ಸಂಪರ್ಕಕ್ಕೆ ಬಂದ ನಂತರ ಎರಡನೇ ಮತ್ತು ಮೂರನೇ ಟ್ವೆಂಟಿ-20 ಪಂದ್ಯಗಳನ್ನು ಆಡಲಿಲ್ಲ.

ಕೃನಾಲ್ ಪಾಂಡ್ಯ ಕೊರೋನ ಸೋಂಕಿಗೆ ಒಳಗಾದ ಬಳಿಕ ಎರಡನೇ ಟಿ-20  ಪಂದ್ಯವನ್ನು ಒಂದು ದಿನ ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News