ಮಂಜೇಶ್ವರ: ಶಾಸಕರಿಗೆ ಸನ್ಮಾನ, ನಿಧನರಾದ ಜಮಾಅತ್ ಅಧ್ಯಕ್ಷರುಗಳ ಅನುಸ್ಮರಣೆ

Update: 2021-08-20 17:17 GMT

ಮಂಜೇಶ್ವರ: ಮಂಜೇಶ್ವರ ಸಂಯುಕ್ತ ಜಮಾಅತ್ ವತಿಯಿಂದ ಮಂಜೇಶ್ವರ ಮೈಮೂನ ಮದ್ರಸ ಸಭಾಂಗಣದಲ್ಲಿ ಶುಕ್ರವಾರದಂದು ನೂತನ ವಾಗಿ ಆಯ್ಕೆಗೊಂಡ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಅವರಿಗೆ ಸನ್ಮಾನ ಹಾಗೂ ಇತ್ತೀಚೆಗೆ ನಿಧನರಾದ ವಿವಿಧ ಜಮಾಅತ್ ಅಧ್ಯಕ್ಷರುಗಳ ಅನುಸ್ಮರಣಾ ಕಾರ್ಯಕ್ರಮವನ್ನು ಹಮ್ಮಿಕೊಳಲಾಯಿತು.

ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಸಯ್ಯದ್ ಸೈಫುಲ್ಲಾ ತಂಙಳ್  ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯದ್ ಅತ್ತಾವುಲ್ಲ ತಂಘಳ್ ಎಂ.ಎ. ಉದ್ಯಾವರ ಉದ್ಘಾಟಿಸಿದರು.

ಬಳಿಕ ನೂತನವಾಗಿ ವಿಧಾನ ಸಭೆಗೆ ಆಯ್ಕೆಗೊಂಡ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಬಳಿಕ ಇತ್ತೀಚೆಗೆ ನಿಧನರಾದ ಉದ್ಯಾವರ ಸಾವಿರ ಜಮಾಅತ್ ಅಧ್ಯಕ್ಷ ಸೂಫಿ ಹಾಜಿ, ಅರಿಮಲೆ ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಕಾಯಿಂಞಿ ಹಾಜಿ ಹಾಗೂ ಪುಚ್ಚತ್ತಬೈಲ್ ಜಮಾಅತ್ ಅಧ್ಯಕ್ಷ ಮೋನು ಹಾಜಿ ಅವರುಗಳ ಅನುಸ್ಮರಣೆ ಮಾಡಲಾಯಿತು.

ಸಂಯುಕ್ತ ಜಮಾಅತ್ ಸೆಲ್ ಕಮಿಟಿ ಪದಾಧಿಕಾರಿಗಳಾದ ಬಿ ಎಸ್ ಇಬ್ರಾಹಿಂ, ಆರ್ ಕೆ ಬಾವ ಹಾಜಿ, ಪಿ ಎಚ್ ಅಬ್ದುಲ್ ಹಮೀದ್, ಕೆಎಸ್ಸಾರ್ಟಿಸಿ ಪುತ್ತುಚ್ಚ, ಅದ್ರಾಮ ಹಾಜಿ ಮೊದಲಾದವರು ಮುಂದಾಳತ್ವ ನೀಡಿದರು. ಸಂಯುಕ್ತ ಜಮಾಅತಿಗೊಳಪಟ್ಟ ಜಮಾಅತಿನ ಪ್ರತಿನಿಧಿಗಳು ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಉಮ್ಮರ್ ಹಾಜಿ ಸ್ವಾಗತಿಸಿ, ಕೋಶಾಧಿಕಾರಿ ಇಬ್ರಾಹಿಂ ಪೊಡಿಮೋನು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News