ಪುತ್ತೂರು: 27 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಹಲ್ಲೆ ಪ್ರಕರಣದ ಆರೋಪಿಯ ಸೆರೆ

Update: 2021-08-23 16:07 GMT

ಪುತ್ತೂರು: ಕಳೆದ 27 ವರ್ಷಗಳ ಹಿಂದೆ ಹಲ್ಲೆ ಪ್ರಕರಣವೊಂದರಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೋಮವಾರ ಪುತ್ತೂರು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 

ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಅಳಿಕೆಮನೆ ಎಂಬಲ್ಲಿನ ನಿವಾಸಿ ಟಿ.ಕೆ. ಮುಹಮ್ಮದ್ ಬಂಧಿತ ಆರೋಪಿ.

ಮೂಲತ: ಪುತ್ತೂರಿನ ಅಳಿಕೆಮನೆ ನಿವಾಸಿಯಾಗಿದ್ದು, ಪ್ರಸ್ತುತ ಸುರತ್ಕಲ್ ಕೃಷ್ಣಾಪುರ ಎಂಬಲ್ಲಿ ವಾಸವಿದ್ದು, ಆರೋಪಿಯನ್ನು ಚಾರ್ಮಾಡಿಯ ತೋಟತ್ತಡಿ ಎಂಬಲ್ಲಿಂದ ಬಂಧಿಸಲಾಗಿದೆ. 

ಆರೋಪಿಯು 21-10-1994ರಂದು ಮದುವೆ ವಿಚಾರವೊಂದಕ್ಕೆ ಸಂಬಂಧಿಸಿ ಅಳಿಕೆ ಮನೆ ನಿವಾಸಿ ಎಂ. ಎ. ಮಹಮ್ಮದ್ ಎಂಬವರಿಗೆ ರಸ್ತೆ ಬದಿಯಲ್ಲಿದ್ದ ಕಲ್ಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿ ಆರೋಪಿಸಲಾಗಿತ್ತು. ಆರೋಪಿ ವಿರುದ್ದ ಹಲ್ಲೆ ಪ್ರಕರಣ ದಾಖಲಾಗಿತ್ತು. ಬಳಿಕ ನ್ಯಾಯಾಲಯಕ್ಕೆ ಹಾಜರಾದರೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News