ಶ್ರೀಲಂಕಾ ಶಂಕಿತ ಉಗ್ರರು ಕರಾವಳಿಗೆ ನುಗ್ಗಿದ ಬಗ್ಗೆ ಯಾವುದೇ ಹೈ ಅಲರ್ಟ್ ಬಂದಿಲ್ಲ: ಮಂಗಳೂರು ಕಮಿಷನರ್ ಸ್ಪಷ್ಟನೆ

Update: 2021-08-31 11:50 GMT
ಎನ್. ಶಶಿಕುಮಾರ್

ಮಂಗಳೂರು, ಆ.31: ‘ಶ್ರೀಲಂಕಾದಿಂದ ಭಾರತಕ್ಕೆ ಶಂಕಿತ ಉಗ್ರರು ಒಳನುಸುಳಿದ ಶಂಕೆಯಲ್ಲಿ ಕೇರಳ ಹಾಗೂ ಕರ್ನಾಟಕ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ’ ಎಂದು ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ 'ವಾರ್ತಾಭಾರತಿ' ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಅವರಲ್ಲಿ ಕೇಳಿದಾಗ ಮೇಲಾಧಿಕಾರಿಗಳಿಂದ ತಮಗೆ ಯಾವುದೇ ಹೈ ಅಲರ್ಟ್ ಬಂದಿಲ್ಲ ಎಂದು ತಿಳಿಸಿದ್ದಾರೆ.

‘ಶ್ರೀಲಂಕಾದಿಂದ 12 ಶಂಕಿತ ಉಗ್ರರು ಎರಡು ಯಾಂತ್ರಿಕೃತ ಬೋಟ್‌ನಲ್ಲಿ ಕೇರಳ ಕರಾವಳಿಗೆ ಬಂದಿಳಿದಿರುವ ಮಾಹಿತಿ ಗುಪ್ತಚರ ಇಲಾಖೆಗೆ ಲಭಿಸಿದೆ. ಇವರು ಕರಾವಳಿ ಮೂಲಕ ಪಾಕಿಸ್ತಾನಕ್ಕೆ ತೆರಳಲಿದ್ದಾರೆ’ ಎಂದು ಕೂಡ ಕೆಲವು ನ್ಯೂಸ್ ವೆಬ್‌ಸೈಟ್, ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಆದರೆ ಈ ಬಗ್ಗೆ ಅಧಿಕೃತತೆ ಇರಲಿಲ್ಲ.

ಮಂಗಳೂರು ಪೊಲೀಸ್ ಕಮಿಷನರ್ ‘ಇಲಾಖೆಯಿಂದ ತಮಗೆ ಯಾವುದೇ ಆದೇಶ, ಅಲರ್ಟ್‌ಗಳು ಬಂದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News