'ಶ್ರೀಕೃಷ್ಣಾ ಮಿಲ್ಕ್' ಸಂಸ್ಥಾಪಕ ಉದ್ಯಮಿ ಪುತ್ತು ಪೈ ನಿಧನ

Update: 2021-08-31 12:28 GMT

ಭಟ್ಕಳ: ಶ್ರೀಕೃಷ್ಣಾ ಮಿಲ್ಕ್ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಪುತ್ತು (ಹನುಮಂತ) ಪೈ ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಉತ್ತರ ಕನ್ನಡದಲ್ಲಿ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಮಾಡಿಕೊಂಡು ಅನೇಕ ಜನರಿಗೆ ಆಸರೆಯಾಗಿದ್ದ ಮಾದರಿ ವ್ಯಕ್ತಿತ್ವದ ಮೃತರು ಇಬ್ಬರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸೋಮವಾರ ಕಿರುವತ್ತಿಯ ತಮ್ಮ ನಿವಾಸದಲ್ಲಿ ಶ್ರೀಕೃಷ್ಣಾಷ್ಟಮಿಯ ಪೂಜೆಯನ್ನು ನೇರವರಿಸಿದ್ದರು. ಪೂಜೆಯ ಬಳಿಕ ಇವರಿಗೆ ಹೃದಯಾ ಘಾತವಾಗಿದೆ ಎಂದು ತಿಳಿದುಬಂದಿದೆ. ಅವರು ಸದಾ ಸಾಮಾಜಿಕ, ಧಾರ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ಭಟ್ಕಳ ಶ್ರೀ ಶಾಂತೇರಿ ಕಾಮಾಕ್ಷೀ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅಭಿವೃದ್ಧಿಗೆ ತನ್ನದೆ ಕೊಡುಗೆ ನೀಡಿದ್ದರು. ಪುತ್ತು ಪೈ ಅವರ ಅಕಾಲಿಕ ನಿಧನಕ್ಕೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸಂತಾಪ ಸೂಚಿಸಿದೆ. ಭಟ್ಕಳ ಜಿಎಸ್ಬಿ ಸಮಾಜದ ಅಂಗಡಿ ಮಳಿಗೆಗಳು ಬಂದ್ ಮಾಡಿ ಗೌರವ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News