×
Ad

ಆರೋಪ ಸಾಬೀತಾದರೆ ಗಲ್ಲಿಗೇರಲು ಸಿದ್ಧ: ಅಭಿಷೇಕ್ ಬ್ಯಾನರ್ಜಿ

Update: 2021-09-05 23:30 IST

ಕೋಲ್ಕತ್ತಾ:  ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ  ತಾನು ಸಿದ್ಧ ಎಂದು ಹೇಳಿರುವ ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ತನ್ನ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಸಾಬೀತಾದರೆ ಸಾರ್ವಜನಿಕವಾಗಿ ಗಲ್ಲಿಗೇರಲು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ  ಅಭಿಷೇಕ್ ಬ್ಯಾನರ್ಜಿಗೆ  ಕಲ್ಲಿದ್ದಲು ಹಗರಣದ ಆರೋಪದ ತನಿಖೆಗೆ ಸಂಬಂಧಿಸಿದಂತೆ ಸೋಮವಾರ ಈಡಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ಅಭಿಷೇಕ್  ಪತ್ನಿ ರುಜಿರಾ ಬ್ಯಾನರ್ಜಿ ಕೂಡ ಸೆಪ್ಟೆಂಬರ್ 1 ರಂದು ಏಜೆನ್ಸಿಯ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ತನಗೆ ಇಬ್ಬರು ಚಿಕ್ಕ ಮಕ್ಕಳಿದ್ದು, ದಿಲ್ಲಿಯ ಬದಲಿಗೆ ಕೊಲ್ಕತ್ತಾದ ಮನೆಯಲ್ಲಿ ತನ್ನನ್ನು ಪ್ರಶ್ನಿಸುವಂತೆ ಈಡಿಯನ್ನು ಕೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News