ರಾಜ್ಯ ಲೆಕ್ಕ ಪರಿಶೋಧಕರ ಸಂಘಕ್ಕೆ ಚಂದನ್‌ ಕುಮಾರ್ ಹೆಗ್ಡೆ ಅಧ್ಯಕ್ಷರಾಗಿ ಆಯ್ಕೆ

Update: 2021-09-09 12:42 GMT
ಚಂದನ್‌ ಹೆಗ್ಡೆ

ಕುಂದಾಪುರ, ಸೆ.9: ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ 48ನೇ ವಾರ್ಷಿಕ ಮಹಾಸಭೆಯಲ್ಲಿ 2021- 2022ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಅಂಪಾರು ಚಂದನ್‌ ಕುಮಾರ್ ಹೆಗ್ಡೆ ರಾಜ್ಯಾಧಕ್ಷರಾಗಿ ಆಯ್ಕೆಯಾಗಿದ್ದಾರೆ.

ಮೂಲತ ಕಾರ್ಕಳ ತಾಲೂಕು ಕಣಜಾರು ಗ್ರಾಮದ ಪಟೇಲರ ಮನೆಯವರಾದ ಚಂದನ್ ಹೆಗ್ಡೆ, ಉಡುಪಿ ಜಿಲ್ಲಾ ಭಾರತೀಯ ಲೆಕ್ಕ ಪರಿಶೋಧಕ ಸಂಘದ ಸದಸ್ಯರಾಗಿದ್ದಾರೆ.

ಸಂಘದ ಕಾರ್ಯದರ್ಶಿಯಾಗಿ ಸುಜಾತಾ ಜಿ., ಉಪಾಧ್ಯಕ್ಷರಾಗಿ ಪ್ರಮೋದ್ ಶ್ರೀಹರಿ, ಜಂಟಿ ಕಾರ್ಯದರ್ಶಿಯಾಗಿ ಶಿವಪ್ರಕಾಶ್ ವಿರಕ್ತಮಠ್, ಖಜಾಂಚಿ ಯಾಗಿ ವಿಜಯಕುಮಾರ್ ಎಂ.ಪಟೇಲ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News