​ಮಕ್ಕಳು ಸಹಿತ ಗದಗ ಮೂಲದ ಮಹಿಳೆ ನಾಪತ್ತೆ: ದೂರು ದಾಖಲು

Update: 2021-09-21 15:57 GMT

ಮಂಗಳೂರು, ಸೆ.21: ಅಶೋಕ ನಗರ ನಿವಾಸಿ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳ ಜತೆ ನಾಪತ್ತೆಯಾಗಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗದಗ ಮೂಲದ ರೇಣುಕಾ ಚೌಡಾಳ (30) ಮತ್ತು ಇಬ್ಬರು ಮಕ್ಕಳು ನಾಪತ್ತೆಯಾದವರು.

ಮಹಿಳೆಯ ಪತಿ ನಾಗರಾಜ ಹಾಲಪ್ಪ ಅವರು ಸೆ.17ರಂದು ತನ್ನ ಊರಾದ ಗದಗ ಜಿಲ್ಲೆಯ ಹೆಬ್ಬಾಳಕ್ಕೆ ಹೋಗಿ, ಸೆ.20ರಂದು ಮರಳಿದ್ದಾರೆ. ಅಶೋಕನಗರದ ಕಲ್ಬಾವಿ ಸಾಗರ ಕೋಟ್ನ 5ನೇ ಅಡ್ಡ ರಸ್ತೆಯಲ್ಲಿರುವ ಬಾಡಿಗೆ ಮನೆಗೆ ಬಂದು ನೋಡುವಾಗ ಪತ್ನಿ ರೇಣುಕಾ, ಪುತ್ರಿ, ಪುತ್ರ ಮನೆಯಲ್ಲಿ ಕಾಣಿಸಲಿಲ್ಲ. ಮನೆಯ ಮನೆಯ ಮಾಲಕರಲ್ಲಿ ವಿಚಾರಿಸಿದಾಗ ಸೆ.18ರಂದು ಮಹಿಳೆ ಮನೆಯ ಎಲ್ಲ ಸಾಮಗ್ರಿಗಳೊಂದಿಗೆ ಚಿಕ್ಕಮ್ಮನ ಊರಿಗೆ ಹೋಗಿರುವುದಾಗಿ ತಿಳಿಸಿರುವುದಾಗಿ ಹೇಳಿದ್ದಾರೆ. ಆದರೆ ಎಲ್ಲಿ ಹುಡುಕಾಡಿದರೂ ಮಹಿಳೆ, ಮಕ್ಕಳು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News